Category: Kannada ಕನ್ನಡ

  • ಈವರೆಗಿನ ಪಯಣ

    ನಮಸ್ಕಾರ,

    ವ್ಯವಸ್ಥಾ ಪ್ರಬಂಧದ (Management) ಈ ಅಂಕಣಗಳ ಶ್ರೇಣಿಯಲ್ಲಿ ಮುಂದುವರೆಯುವ ಮುನ್ನ, ಒಂದು ಹಿನ್ನೋಟ ಅಗತ್ಯವೆನಿಸಿತು ಹಾಗಾಗಿ ಈ ವಿಶೇಷ ಅಂಕಣವನ್ನು ಇಲ್ಲಿ ಸೇರಿಸಿದ್ದೇನೆ. ನಾವು ಕಲಿತದ್ದನ್ನು ಪುನರಾವರ್ತಿಸಿ ಯಥಾದೃಶ್ಯ ರೂಪಣ ನೀಡುವುದೇ ಇದರ ಉದ್ದೇಶ.

    ಇಲ್ಲಿಯವರೆಗೆ, ವ್ಯವಸ್ಥಾ ಪ್ರಬಂಧವನ್ನು ಜಟಿಲ ನಿರ್ಧಾರಗಳನ್ನು ತೆಗುದುಕೊಳ್ಳುವ ಕಾರ್ಯ ಎಂದು ತಿಳಿದು, ಮುನ್ನಡೆಯುತ್ತ ವ್ಯವಹಾರ ಪ್ರತಿಕೃತಿಯು ಹೇಗೆ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಜೋಡಿಸುವುದೆಂದು ಅರಿತುಕೊಂಡೆವು. ವ್ಯವಹಾರ ಪ್ರತಿಕೃತಿಯ ಸಫಲತೆಯಲ್ಲಿ ವ್ಯವಹರಾಂಗಗಳು ಬಹು ಮುಖ್ಯಪಾತ್ರ ವಹಿಸುತ್ತವೆ, ಇದರಂತೆಯೇ ಉತ್ಪನ್ನಾಂಶಗಳು ಮತ್ತು ಅವುಗಳ ರೂಪರೇಶೆಗಳ ಸರಿಯಾದ ತಿಳುವಳಿಕೆ, ನಿರ್ಧಾರ ತೆಗೆದುಕೊಳ್ಳುವ ಕಾರ್ಯದಲ್ಲಿ ತುಂಬಾ ಸಹಾಯಕವಾಗುವುದು.

    ನೀವು ಗಮನಿಸಿರಬಹುದು, ಈ ಅಂಕಣಗಳಲ್ಲಿ ನಾನು ಪಠ್ಯಕ್ರಮದಲ್ಲಿರುವಂತೆ ಪ್ರತಿ ವಿಷಯವನ್ನು ಒಂದೊಂದಾಗಿ ತಿಳಿಸದೆ, ಆ ವಿಷಯದ ಉಪಯೋಗ ಮತ್ತು ಅದನ್ನು ಉಪಯೋಗಿಸಿ ನಿರ್ಧಾರ ಮಾಡುವುದರ ಉದ್ದೇಶದಿಂದ ಈ ವ್ಯತ್ಯಾಸವನ್ನು ಅಳವಡಿಸಿದ್ದೇನೆ. ಮುಂಬರುವ ದಿನಗಳಲ್ಲಿ ಒಂದೊಂದಾಗಿ ವ್ಯವಸ್ಥಾ ಪ್ರಬಂಧದ ಸೊಗಸನ್ನು ಬಿಚ್ಚಿಡುವ ಪ್ರಯತ್ನದಲ್ಲಿ ನಿರತನಾಗುವೇ.

    ನಿಮ್ಮ ಪತ್ರಗಳು ಮತ್ತು ಇತರೆ ಸಂಪರ್ಕದಿಂದ ನನಗೆ ಪ್ರೋತ್ಸಹಿಸಿರೋದನ್ನು ನೋಡಿ ನನ್ನ ಹುಮ್ಮಸ್ಸು, ಉತ್ಸಾಹ ಇಮ್ಮಡಿಯಾಗಿದೆ. ಧನ್ಯವಾದಗಳು. ಮುಂದಿನ ವಾರ ಸಿಗೋಣ. – ಸಚ್ಚಿ


  • ವ್ಯವಹಾರ ಪ್ರತಿಕೃತಿ – ಚರ್ಚೆ ಭಾಗ ೧

    ಯಾವುದಾದರು ವಾಣಿಜ್ಯ ಅವಕಾಶವನ್ನು ಗುರುತಿಸಿಕೊಂಡಾಗ, ನನ್ನ ಮನಸಿನ್ನಲ್ಲಿ ಬರುವ ಎರಡು ಯೋಚನೆಗಳು – ಇದನ್ನು ನಾನು ಹೇಗೆ ವಾಣಿಜ್ಯ ವ್ಯವಹಾರವನ್ನಾಗಿ ಪರಿವರ್ತಿಸಬಹುದು ಮತ್ತು ಆ ಬೇಡಿಕೆಗೆ ಅನುಗುಣವಾಗಿ ಪೂರೈಕೆಯನ್ನು ಹೇಗೆ ಮಾಡುವುದು. ಈ ಎರಡು ಪ್ರಶ್ನೆಗಳ ಉತ್ತರವೇ ವ್ಯವಹಾರದ ಪ್ರತಿಕೃತಿ (Business Model), ಇದರಿಂದ ಸಂಪಾದನೆ ಆಗುವ ಹಣಕಾಸು ಸಾರ್ಥಕತೆಯ ಪ್ರತೀಕ.
    ಇಂತಹ ಪ್ರಮುಖವಾದ ಅಂಶದ ಮೇಲೆ, ಪ್ರತಿ ವ್ಯವಹಾರಿ ಮತ್ತು ವರ್ತಕನು ಗಮನಹರಿಸಲೇ ಬೇಕು, ಆದರೆ ಯಾವುದೇ ಒಂದು ವ್ಯವಹಾರ ಪ್ರತಿಕೃತಿ ಆ ವ್ಯವಹಾರದ ಯಶಸ್ಸಿನ ಭರವಸೆ ನೀಡಲು ಅಸಮರ್ಥವಾಗಿರುತ್ತದೆ. ಒಂದು ವ್ಯವಹಾರಕ್ಕೆ ಯಶಸ್ಸು ಕಾಣಿಸಿದ ಪ್ರತಿಕೃತಿ ಇನ್ನೊಂದಕ್ಕೆ ಯಶಸ್ಸು ನಿಶ್ಚಯಿಸಿರುವುದಿಲ್ಲ , ಪ್ರತಿಯೊಂದು ವ್ಯವಹಾರವು ತನ್ನದೇ ಆದ ಪ್ರತಿಕೃತಿಯನ್ನು ಕಂಡುಹಿಡಿಯತಕ್ಕದ್ದು. ಇದಕ್ಕೆ ಅನುಗುಣವಾಗಿ ವ್ಯವಹಾರದಲ್ಲಿ ಪಾಲ್ಗೊಳ್ಳುವ ಎಲ್ಲರ ಒಳನೋಟ ತುಂಬಾ ಪ್ರಮುಖವಾಗಿರುತ್ತದೆ.
    ವ್ಯವಹಾರ ಪ್ರತಿಕೃತಿ ಸರ್ವೇಸಾಮಾನ್ಯವಾಗಿ, ಹೊಸತನದ ಚಿಲುಮೆಯಾಗಿರುತ್ತದೆ. ವ್ಯವಹಾರ ಪ್ರತಿಕೃತಿ ಮತ್ತು ಅದರೊಂದಿಗೆ ಬರುವ ಹೊಸತನದ ಆಧಾರ – ವ್ಯವಹಾರಾಂಗಗಳು, ಅರ್ಥಶಾಸ್ತ್ರ, ಆರ್ಥಿಕತೆ ಮುಂತಾದವುಗಳು. ಒಂದು ಸಾಧಾರಣವಾದ ಆವಿಷ್ಕಾರಕ್ಕೆ ಪೂರಕವಾಗಿ ಒಳ್ಳೆಯ ವ್ಯವಹಾರ ಪ್ರತಿಕೃತಿ ದೊರೆತಲ್ಲಿ, ಅದು ಅತ್ಯಾದ್ಭುತವಾದ ಆವಿಷ್ಕಾರಕ್ಕೆ ದೊರೆತ ಸಾಧಾರಣ ವ್ಯವಹಾರ ಪ್ರತಿಕೃತಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುವುದನ್ನು ಕಂಡಿದ್ದೇವೆ. ಯಾವುದೇ ವ್ಯವಹಾರ ಪ್ರತಿಕೃತಿಯ ಯಶಸ್ಸು ಎರಡು ಮುಖ್ಯ ಪ್ರಶ್ನೆಗಳ ಮೇಲೆ ನಿಂತಿದೆ
    – ವ್ಯವಹಾರ ಹೇಗೆ ತನ್ನ ಆದಾಯ ಪಡೆಯುವುದು?
    – ಆ ಆದಾಯ ಎಷ್ಟು ಬೇಗ ದೊರಕುವುದು?
    ಸೂಕ್ತವಾದ ವ್ಯವಹಾರ ಪ್ರತಿಕೃತಿಯನ್ನು ಕಂಡುಕೊಳ್ಳುವುದು, ಈ ಸ್ಪರ್ಧಾತ್ಮಕ ವಾಣಿಜ್ಯ ಕ್ಷೇತ್ರದಲ್ಲಿ ಅತೀ ಮುಖ್ಯವಾದುದು. ಮುಂಬರುವ ಅಂಕಣಗಳಲ್ಲಿ ಇಂತಹ ಹಲವು ವ್ಯವಹಾರ ಪ್ರತಿಕೃತಿಯ ಬಗ್ಗೆ ತಿಳಿಯುವ ಪ್ರಯತ್ನಮಾಡೋಣ.

  • ವಿನಿಮಯದ ಚರ್ಚೆ- ಬೇಡಿಕೆ ಮತ್ತು ಪೂರೈಕೆ

    ಏನನ್ನಾದರೂ ಖರೀದಿಸಲೆಂದು ಮಾರುಕಟ್ಟೆಗೆ ಹೋಗುವಾಗ ಆ ವಸ್ತುವಿನ ಗುಣಗಳ ಬಗ್ಗೆ ತಿಳಿದು ಅದಕ್ಕೆ ತಕ್ಕಂತೆ ಮಾನಸಿಕವಾಗಿ ಒಂದು ಮೊತ್ತವನ್ನು ನೀಡಲು ನಿರ್ಧರಿಸಿರುತ್ತೇವೆ (ಸದ್ಯಕ್ಕೆ “ಬ್ರ್ಯಾಂಡ್” ಮುಂತಾದವುಗಳ ಬಗ್ಗೆ ಯೋಚಿಸುವುದು ಬೇಡ). ಮಾರುಕಟ್ಟೆಗೆ ಹೋದಾಗ ‘ಅ‘ ವಸ್ತು ಸಿಕ್ಕ ನಂತರ, ಮತ್ತು ಅದೇ ಗುಣಗಳುಳ್ಳ ಇನ್ನೊಂದು ವಸ್ತು ‘ ಸಿಕ್ಕಿದ ನಂತರ ಅಲ್ಲೇ ಇರುವ ಮಾರಟಗರನಿಗೆ “ಇವುಗಳ ಬೆಲೆ ಎಷ್ಟು?” ಎಂದು ಕೇಳಿದಾಗ ‘ಅ’ಗೆ ರೂ.೧೫, ‘‘ಗೆ ರೂ.೧೦ ಎಂದು ಹೇಳಿದಾಗ ನಿಶ್ಚಯವಾಗಿ ‘ಬ’ ವನ್ನು ಕೊಂಡುಕೊಳ್ಳುತ್ತೇವೆ. ಇದನ್ನೇ “ಲಾ ಆಫ್ ಡಿಮಂಡ್” ಅಥವಾ “ಬೇಡಿಕೆಯ ನಿಯಮ” ಎಂದು ಕರೆಯುತ್ತೇವೆ. ಇದರಂತೆ ಎಲ್ಲವೂ ಸಮಾನವಾಗಿದ್ದಲ್ಲಿ, ನಾವು ವಸ್ತುವನ್ನು ಕೊಂಡುಕೊಳ್ಳುವ ನಿರ್ಧಾರ ಆ ವಸ್ತುವಿನ ಬೆಲೆಯ ಮೇಲೆ ಆಧಾರಿತವಾಗಿದೆ; ಬೆಲೆ ಹೆಚ್ಚಿದ್ದಲ್ಲಿ ಆ ವಸ್ತುವಿನ ಬೇಡಿಕೆ ಕಡಿಮೆ ಆಗುತ್ತದೆ, ಬೆಲೆ ಕಡಿಮೆ ಇದ್ದಲ್ಲಿ ಅದರ ಬೇಡಿಕೆ ಹೆಚ್ಚುತ್ತದೆ. ಇದನ್ನು ಕೆಳಕಂಡ “ಡಿಮಾಂಡ್ ಗ್ರ್ಯಾಪ್ಹ್” ನಲ್ಲಿ ತೋರಿಸಿದ್ದಾರೆ.

    ಸದ್ಯಕ್ಕೆ ನಾನೊಬ್ಬ ತರಕಾರಿ ವರ್ತಕನೆಂದು ಕೊಳ್ಳೋಣ, ನನ್ನ ಹತ್ತಿರ, ಸಾಕಷ್ಟು ಭೂಮಿ ಇದ್ದು, ಅದರಲ್ಲಿ ಬೆಳೆಸಿದ ಬೂದುಕುಂಬಳಕಾಯಿಯನ್ನು ತಲಾ ರೂ. ೨೦ಕ್ಕೆ ಮಾರುತ್ತಿರುವಾಗ ಯಾರೋ ಇನ್ನೊಬ್ಬ ವರ್ತಕನು ಬಂದು ನನಗೆ ನಿನ್ನಲ್ಲಿರುವ ಎಲ್ಲಾ ಕುಂಬಳಕಾಯಿಗಳನ್ನೂ ನೀಡು, ಪ್ರತಿಯೊಂದಕ್ಕು ರೂ. ೨೫ ಕೊಡುತ್ತೇನೆ, ಎಂದಾಗ ನಾನು ಒಪ್ಪಿ ಕೊಳ್ಳುತ್ತೇನೆ – ನನಗೆ ಲಾಭ ಹೆಚ್ಚಾಗುತಿದ್ದಲ್ಲಿ ನಾನ್ಯಾಕೆ ಬಿಡಲಿ? ಅಂತೆಯೇ ಈ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು “ಲಾ ಆಫ್ ಸಪ್ಲೈ” (ಪೂರೈಕೆಯ ನಿಯಮ) ನಿರ್ಮಿಸಿದ್ದಾರೆ. ಇದನ್ನೇ ನಾವು “ಸಪ್ಲೈ ಗ್ರ್ಯಾಪ್ಹ್” ನಲ್ಲಿ ತೋರಿಸಿದ್ದೇವೆ.

    ಇವೆಲ್ಲದರ ಪ್ರಾಮುಖ್ಯತೆ ನಾವು ಕೈಗೊಳ್ಳುವ ನಿರ್ಧಾರಗಳಲ್ಲಿ ಅತೀ ಮುಖ್ಯವಾಗಿರುತ್ತವೆ. ಇನ್ನು ಮುಂಬರುವ ಅಂಕಣಗಳಲ್ಲಿ ಸಮೀಪವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುವೆವು.

    ಇದರ ಆಂಗ್ಲ ಅನುವಾದ ಅಂಕಣ: http://somanagement.blogspot.com/2011/02/modeling-supply-and-demand-discussion.html

  • ಉತ್ಪಾದನಾಂಶ

    ಉತ್ಪಾದನೆಗೆ ಬೇಕಾಗುವ ಪದಾರ್ಥಗಳು ಮತ್ತು ಸೇವೆಗಳನ್ನೆಲ್ಲ ಉತ್ಪಾದನಾಂಶವೆಂದು ಕರೆಯುತ್ತೇವೆ. ಇಂತಹ ಉತ್ಪಾದನಾಂಶಗಳಲ್ಲಿ ಪ್ರಾಥಮಿಕವದವುಗಳು – ನೆಲ, ಮಾನವ ಶ್ರಮ, ಮತ್ತು ಬಂಡವಾಳ ಆಧಾರಿತ ಸರುಕು ಸಾಮಗ್ರಿಗಳು ಮತ್ತು ಯಂತ್ರಗಳು.
    ನೆಲವೆಂದರೆ ಕೇವಲ ಭೂಮಿಮಾತ್ರವಲ್ಲ, ಅದರಲ್ಲಿ ಬರುವ ನೈಸರ್ಗಿಕ ಸಂಪನ್ಮೂಲಗಳು ಸೇರಿರುತ್ತವೆ – ಇದಕ್ಕೆ ಪ್ರತಿಯಾಗಿ ನಾವು ಸರಿಯಾದ ಗುತ್ತಿಗೆ ನೀಡಬೇಕಾಗುತ್ತದೆ, ಅಂತೆಯೇ ಮಾನವ ಶ್ರಮಕ್ಕೆ ಸಂಬಳ ಮತ್ತು ಬಂಡವಾಳಕ್ಕೆ ಬಡ್ಡಿಯನ್ನು ನೀಡಬೇಕಾಗುತ್ತದೆ. ಯಾವುದೇ ವ್ಯವಹಾರದ ಆಧಾರವಾಗಿರುವ ಇವುಗಳು, ಕೇವಲ ಪೂರಕವಾಗಿದ್ದು, ತಾವೇ, ಯಾವುದೇ ಕಾರಣಕ್ಕೂ ಪರಿವರ್ತನೆ ಹೊಂದುವುದಿಲ್ಲ – ಆದ್ದರಿಂದಲೇ ಇವುಗಳನ್ನು ಪ್ರಾಥಮಿಕ ಉತ್ಪಾದನಾಂಶ ಎನ್ನುತ್ತೇವೆ.
    ಇವುಗಳಲ್ಲಿ ನೆಲದ ಉಪಯೋಗ ಸ್ಥೂಲವಗಿರುತ್ತದೆ , ಆದರೆ ಮಾನವ ಶ್ರಮ ಮತ್ತು ಬಂಡವಾಳ ಸಕ್ರಿಯವಾಗಿರುತ್ತದೆ, ಮಾನವರನ್ನು ಮತ್ತು ಯಂತ್ರಗಳು ಮುಂತಾದವನ್ನು ಒಂದು ಸ್ಥಳದಿಂದ ಇನ್ನೊಂದೆಡೆಗೆ ಸಾಗಿಸ ಬಹುದು ಆದರೆ ನೆಲಕ್ಕೆ ಇಂತಹ ಸವಲತ್ತಿಲ್ಲ, ಆದ್ದರಿಂದಲೇ ಇದನ್ನು ಸ್ಥೂಲವೆಂದು ಪರಿಗಣಿಸುತ್ತೇವೆ.
    ಇಂತಹ ಉತ್ಪಾದನಾಂಶಗಳನ್ನು ಕುರಿತ ಪ್ರಮುಖ ದ್ವಂದ್ವವೊಂದಿದೆ – ಶ್ರಮ ಮತ್ತು ಬಂಡವಾಳ ಒಂದನ್ನು ಇನ್ನೊಂದಾಗಿ ಬದಲಾಯಿಸಬಹುದು – ಹೀಗಿರುವಾಗ, ದಕ್ಷವಾದ ನಿರ್ಧಾರ ತೆಗೆದುಕೊಂಡು, ಮುನ್ನಡೆಸಬೇಕಾಗುತ್ತದೆ. ಇದನ್ನು ಅಳತೆಮಾಡುವುದಕ್ಕೆ ಪ್ರಮಾಣಳತೆ ಪ್ರತಿ ಕಾರ್ಮಿಕರ ಮೇಲೆ ಹೂಡುವ ಬಂಡವಾಳ. – ಇದರಂತೆ ಮಾನವ ಶ್ರಮ ಮತ್ತು ಬಂಡವಾಳ ಸರಿಯಾದ ಪ್ರಮಾಣದಲ್ಲಿರತಕ್ಕದ್ದು.

    ಇದರಲ್ಲಿ ವ್ಯತ್ಯಾಸ ಕಂಡಲ್ಲಿ ವ್ಯವಹಾರದ ಸಾಮರ್ಥ್ಯ ಏರುಪೇರಾಗುವ ಸಾದ್ಯತೆ ಹೆಚ್ಚು. ಅಂತೆಯೇ ಸರಿಯಾದ ನಿರ್ಧಾರತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾದುದು. ಇಂತಹ ನಿರ್ಧಾರವು ಯಾವುದೇ ಒಂದು ಉತ್ಪಾದನಾಂಶಕ್ಕೆ ಸೀಮಿತಗೊಳಿಸದೆ, ಸರಕಾರ, ವಾಣಿಜ್ಯ, ಪರಿಸರ, ಮುಂತಾದವನ್ನು ಲೆಕ್ಕಿಸಿ ನಿರ್ಧರಿಸಬೇಕು.
    ಇಂದಿನ ಆಂಗ್ಲ ಅಂಕಣ:http://somanagement.blogspot.com/2011/02/factors-of-production.html

  • ವ್ಯವಹಾರಂಗಗಳು

    ವಾಣಿಜ್ಯ ಸಂಸ್ಥೆಯ ವಿವಿಧ ಕಾರ್ಯಗಳನ್ನು ನಡೆಸುವ ವ್ಯವಹಾರದ ವಿಭಾಗಗಳಿಗೆ ವ್ಯವಹಾರಂಗವೆನ್ನುವರು,
    ಯಾವುವೆ ಸಂಸ್ಥೆಯನ್ನು ಗಮನಿಸಿದಾಗ ಅವುಗಳಲ್ಲಿ ಕಡ್ಡಾಯವಾಗಿ ಕೆಳಗಂಡ ಅಂಗಗಳಿವೆಯೆಂದು ಅರಿವಾಗುತ್ತದೆ.
    • ವಿಕ್ರಯ ಹಾಗು ಸೇವೆ [Sales and Service]: ಗ್ರಾಹಕರಿಗೆ ಅತೀ ಸಾಮಿಪ್ಯದಲ್ಲಿರುವ ವಿಭಾಗ. ಇದು ಪ್ರತಿ ವಾಣಿಜ್ಯ ಸಂಸ್ಥೆಯ ಚಾಲನೆಗೆ ಬಹುಮುಖ್ಯವಾದುದು.
    • ಮಾರಟಗಾರಿಕೆ [Marketing]: ಸಂಸ್ಥೆ ಹಾಗು ಸಂಸ್ಥೆಯ ಉತ್ಪತ್ತಿಯನ್ನು ಗ್ರಾಹಕರಿಗೆ ಮನದಟ್ಟು ಮಾಡುವುದು ಇದರ ಪ್ರಮುಖ ಧ್ಯೇಯ.
    • ಮಾನವ ಸಂಪನ್ಮೂಲ ಹಾಗು ಕಾರ್ಯಭಾರ[Human Resource & Admin]: ಸಂಸ್ಥೆಯ ನಿಜಸ್ವತ್ತು ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು; ದಿನನಿತ್ಯದ ಕಾರ್ಯಗಳ ವಹಿವಾಟುಗಳನ್ನೂ ನೋಡಿಕೊಳ್ಳುವುದು..
    • ಅನ್ವೇಷಣೆ ಹಾಗು ಅಭಿವೃದ್ಧಿ[Research & Development]: ಬದಲಾಗುತ್ತಿರುವ ಕಾಲದಲ್ಲಿ ಉತ್ಪನ್ನಗಳನ್ನು ನಿರಂತರ ಸುಧಾರಣೆ, ಅವಿಷ್ಕಾರ ಮತ್ತು ಅಭಿವೃದ್ಧಿ ಬಹುಮುಖ್ಯವಾದುದು. ಗ್ರಾಹಕರನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವುದು ಈ ವಿಭಾಗದ ಕಾರ್ಯ.
    • ಕ್ರಿಯಾಶಸ್ತ್ರ ಹಾಗು ಉತ್ಪಾದನೆ[Operation & Production]: ಉತ್ಪಾನ್ನಗಳ ತಯಾರಿಕೆಯನ್ನು ಸುಲಲಿತವಾಗಿ ಮತ್ತು ಕುಶಲತೆಯಿಂದ ಸರಿಯಾದ ಸಮಯಕ್ಕೆ ಮಾಡುವುದು ಈ ವಿಭಾಗದ ಕರ್ತವ್ಯ. ಸಂಸ್ಥೆಯ ಉತ್ಪಾದನೆಗೆ ಬಹಳ ಪ್ರಮುಖವಾದ ವಿಭಾಗ.
    • ಮಾಹಿತಿ ತಂತ್ರಜ್ಞಾನ[Information Technology]: ಕೈಗಾರಿಕೆ ಅಥವಾ ಸಂಸ್ಥೆಯಲ್ಲಿ ಜರುಗುವ ಎಲ್ಲ ಕಾರ್ಯಗಳ ಮೇಲ್ವಿಚಾರಣೆ ಮತ್ತು ತ್ವರಿತ ನಿರ್ಧಾರಕ್ಕೆ ಮಾಹಿತಿ ಸಂಗ್ರಹಣೆ ಹಾಗು ಅದರ ಪ್ರಬಂಧನೆ ಈ ವಿಭಾಗದ ಕಾರ್ಯ ಚಟುವಟಿಕೆ.
    • ಹಣಕಾಸು ಮತ್ತು ಲೆಕ್ಕಾಚಾರ[Accounting and Finance]: ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ನೋಡಿಕೊಳ್ಳುವುದು ಮತ್ತು ಉತ್ಪನ್ನಗಳಿಗೆ ಸರಿಯಾದ ಹಣಕಾಸಿನ ವ್ಯವಸ್ಥೆ ಮಾಡುವುದು ಇದರ ಮೂಲ ಕಾರ್ಯ
    ಮೇಲ್ಕಂಡ ವ್ಯವಹಾರಂಗಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದ್ದೇನೆ.


    ಪ್ರತೀ ಸಂಸ್ಥೆಯಲ್ಲೂ ಇಂತಹ ವ್ಯವಹರಂಗಳಿರುತ್ತವೆ , ಆದರೆ ಆ ಸಂಸ್ಥೆಯ ಪ್ರಮುಖವಾದ ಕಾರ್ಯಕ್ಷೇತ್ರದ ಮೇಲೆ, ಇವುಗಳಲ್ಲಿ ಯಾವುದು ಮತ್ತೊಂದಕ್ಕಿಂತ ಹೆಚ್ಚು ಮುಖ್ಯಯೆನ್ನುವುದು ನಿರ್ಧಾರವಾಗುತ್ತದೆ. ಉದಾಹರಣೆಗೆ:

    “ಬ್ಯಾಂಕ್” ಗಳಲ್ಲಿ ಮಾರಟಗರಿಕೆಗಿಂತಲೂ ಹಣಕಾಸು ಮತ್ತು ಮಾಹಿತಿ ತಂತ್ರಜ್ನ್ಯಾನ ಮುಖ್ಯ ಪಾತ್ರ ವಹಿಸುತ್ತದೆ.

  • ಮ್ಯಾನೇಜ್ಮೆಂಟ್ ನಿಜಾರ್ಥದಲ್ಲಿ ಏನು?

    ಸರ್ವೇಸಾಮಾನ್ಯವಾಗಿ “ಇದನ್ನ ಮ್ಯಾನೇಜ್ ಮಾಡ್ಕೋ, ನಾನೀಗ ಬರ್ತೀನಿ” ಅಂತ ಹೇಳೋದನ್ನ ಕೇಳಿರ್ತಿವಿ; ನಿಜಾರ್ಥದಲ್ಲಿ ನಾವು ಹೇಳೋದಾದರೂ ಏನು?
    ಕೂಲಂಕುಷವಾಗಿ ಗಮನಿಸಿದಾಗ ನಾವು ಹೇಳಲು ಇಚ್ಚಿಸ್ತಿರೋದು “ಸದ್ಯಕ್ಕೆ ನೀನೇ ಸಂಧರ್ಭಾನುಸರ ಸೂಕ್ತವಾದ ವ್ಯವಸ್ತೆ ಮಾಡಿಕೊಂಡು ನಿಭಾಯಿಸು ” ಎಂದು. ಆ ಅರ್ಥದಲ್ಲಿ ಮ್ಯಾನೆಜ್ಮೆಂಟನ್ನು ವ್ಯವಸ್ಥೆ ನಿಭಾಯಿಸುವುದು ಎಂದು ಕರಿಬೋದು. ಇನ್ನು ಗಹನವಾಗಿ ಸುವ್ಯವಸ್ಥೆಗಾಗಿ ಮಾಡುವ ನಿರ್ಧಾರಗಳೇ ನಿಜಾರ್ಥದಲ್ಲಿ ಮ್ಯಾನೇಜ್ಮೆಂಟ್.
    ಹಾಗಾದ್ರೆ, ನಿರ್ಧಾರ ತೆಗೆದುಕೊಳ್ಳೋದು ಅಷ್ಟು ಕಷ್ಟನಾ?

    ಹೌದು, ದಲ್ಲಿ ಹೇಳಿಕೊಡುವಂತೆ ಸಂಪೂರ್ಣ ಮಾಹಿತಿ, ನಿಜ ಜೀವನದಲ್ಲಿ ಎಲ್ಲ ಮಾಹಿತಿಗಳು ಲಭ್ಯವಿರದು ಹಾಗಾಗಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟದ ಕಾರ್ಯವೇ ಸರಿ. ನಿರ್ಧಾರ ತೆಗೆದುಕೊಳ್ಳುವವರಿಗೆ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಅವಕಾಶಗಳಿರುತ್ತವೆ / ಆಯ್ಕೆಗಳಿರುತ್ತವೆ. ಪ್ರತೀ ಆಯ್ಕೆಯಲ್ಲೂ ಒಂದು ಪಕ್ಷವನ್ನು ಮೇಲೇರಿಸಿದರೆ ಮತ್ತೊಂದನ್ನು ಕೆಳಗಿಳಿಸಬೇಕಾಗುತ್ತದೆ; ಒಂದೇ ವ್ಯವಸ್ತೆಯ ಮೂಲಕ ಇಬ್ಬರುನ್ನು ಸಮ ಮಟ್ಟಕ್ಕೆ ತರುವುದು ಕಷ್ಟಸಾಧ್ಯವಾದ ಕಾರ್ಯ – ಇದನ್ನು ಪೆರೋಟೋಸ್ ಪ್ರಿನ್ಸಿಪಲ್ ಅಥವಾ ಟ್ರೆಡ್-ಆಫ್ ಅನ್ನುತ್ತಾರೆ. ನಾವಿದನ್ನು ದ್ವಂದ್ವ ಅಂತ ಕರೆಯಬಹುದು.
    ಇಂತಹ ದ್ವಂದ್ವಗಳ ನಿವಾರಣೆಯೇ ವ್ಯವಸ್ಥಾಪ್ರಬಂಧಕನ ಆಧ್ಯ ಕೆಲಸ. ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಂಡು ಕಂಪನಿಗಳು ಹಾಗು ವಾಣಿಜ್ಯ ಸಂಸ್ಥೆಗಳೆನ್ನುವ ಹಡಗನ್ನು ನಿಭಾಯಿಸುವುದೇ ಮ್ಯಾನೇಜ್ಮೆಂಟಿನ ಅಂತರಾಳ. ಯಶಸ್ವೀ ವ್ಯವಸ್ಥಾಪಕ ಪ್ರಭಂಧಕನಾಗ ಬೇಕೆಂದಿರುವವರು ನಿರ್ಧರಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಬಹು ಮುಖ್ಯವಾದುದು.