Category: Kannada ಕನ್ನಡ

  • ವ್ಯವಹಾರ ಮತ್ತು ಕಾನೂನು

    ಸಾಮಾನ್ಯವಾಗಿ ವ್ಯವಹಾರವು ಕೇವಲ ಲಾಭಕ್ಕೆಂದೇ ಇರುವುದೆಂದು ಕೇಳಿರುತ್ತೇವೆ – ಈ ನಂಬಿಕೆಯನ್ನೇ ನಾವು ಹಿಂದಿನ ಅಂಕಣದಲ್ಲಿ ಪ್ರಶ್ನಿಸಿ – ವ್ಯವಹಾರಕ್ಕೆ ಸಾಮಾಜಿಕ ಹೊಣೆಗಾರಿಕೆಯೂ ಅತ್ಯಾಗತ್ಯ ಎಂದು ತಿಳಿಸಿದ್ದೇವೆ. ಇದೇ ಹಿನ್ನಲೆಯಲ್ಲಿ ನಾವು ವ್ಯವಹಾರಕ್ಕೆ ಕಾನೂನಿನ ಚೌಕಟ್ಟು ಅಗತ್ಯ ಎಂದು ಈ ಅಂಕಣ ದಲ್ಲಿ ತಿಳಿದುಕೊಳ್ಳೋಣ.

    ವ್ಯವಹಾರವು ಸಮಾಜದೊಂದಿಗೆ ಎಷ್ಟೊ ಮಟ್ಟಗಳಲ್ಲಿ ಸಂಪರ್ಕಕ್ಕೆ ಒಳಗಾಗುತ್ತದೆ, ಕಂಪನಿಯು ರಾಜ್ಯದ್ದಲ್ಲಿ ಸಿಗುವ ಸಂಪನ್ಮೂಲಗಳನ್ನು ಉಪಯೋಗಿಸುತ್ತದೆ, ಸಮಾಜದಲ್ಲಿಂದ ತನ್ನ ಕಾರ್ಯಕ್ರಮಗಳಿಗೆ ಬೇಕದ ಕಾರ್ಮಿಕರನ್ನು ಕೆಲಸಕ್ಕೆಂದು ತಿಗೆದುಕೊಳ್ಳುತ್ತದೆ. ಈ ರೀತಿ ಸಮಾಜದೊಂದಿಗೆ ಹಲವಾರು ಮಟ್ಟದಲ್ಲಿ ಸಂಪರ್ಕದಲ್ಲಿದ್ದಾಗ ಕರ್ಯಗಳಾನ್ನು ನಡೆಸಲು ಸ್ಥಿರಮತ್ತು ಧ್ರುಡ ಅಡಿಪಾಯವೊಂದು ಬೇಕಾಗುತ್ತದೆ – ಕಾನೂನು ಈ ಅಡಿಪಾಯವನ್ನು ನೀಡಿ ಸುಗಮ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುತ್ತದೆ.

    ಕಾನೂನನ್ನು ಸಾಮಾನ್ಯವಾಗಿ ದುಷ್ಟವ್ಯಕ್ತಿಯನ್ನು ತನ್ನ ವಿಶಯವನ್ನಾಗಿಸಿ ವಿವಿಧ ನಿಯಮಗಳನ್ನು ಮಾಡಿರುತ್ತದೆ; ವ್ಯವಹಾರ ಜಗತ್ತಿನಲ್ಲೂ ಇಂತಹ ಹಲವಾರು ಸನ್ನಿವೇಶಗಳನ್ನು ನೊಡಿರುತ್ತೇವೆ – ಇದನ್ನೇ ವ್ಯವಹಾರ ಕಾನೂನುಗಳು ನಿಯಂತ್ರಿಸಲು ಪ್ರಯತ್ನ ಪಡುತ್ತವೆ.

    ಮುಂಬರುವ ಅಂಕಣಗಳನ್ನು ವ್ಯವಹಾರ ಮತ್ತು ಕಾನೂನನ್ನು ಇನ್ನೂ ನಿಕಟವಾಗಿ ಅರ್ಠೈಸಿಕೊಳ್ಳುವ ಪ್ರಯತ್ನ ಮಾಡೋಣ.

  • ವ್ಯವಹಾರ ವರ್ತನೆ ಚರ್ಚೆ – ೨

    ಹಿಂದಿನ ಅಂಕಣದಲ್ಲಿ ವ್ಯವಹಾರ ವರ್ತನೆಯು ಉದ್ಯೋಗಿಗಳು ಮತ್ತು ವ್ಯವಹಾರಗಳ ವರ್ತನೆಯನ್ನು ಕುರಿತ ಅಧ್ಯಯನ ಎಂದು ತಿಳಿದುಕೊಂಡೆವು. ಅಲ್ಲಿಂದ ಮುಂದುವರೆದು ಈ ವ್ಯವಹಾರ ವರ್ತನೆಯ ಗುಣ ಸ್ವಭಾವಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ನಾನು ಕಲಿತಂತೆ ಇಲ್ಲಿ ಕೆಲವು ಗುಣ ಸ್ವಭಾವಗಳನ್ನು ಪ್ರತಿಯೊಬ್ಬ ಪ್ರಬಂಧಕನು ತಿಳಿದುಕೊಳ್ಳಲೇ ಬೇಕು:
    • ವರ್ತನೆಯು ಸಾಕಷ್ಟು ವಿಷಯಗಳಿಂದ ಪ್ರಭಾವಿತವಾಗಿರುತ್ತದೆ.
    • ವರ್ತನೆಯು ಸಾಕಷ್ಟು ವಿಧದ ವಿಷಯಗಳಿಂದ ಪ್ರಭಾವಿತವಾಗಿರುತ್ತದೆ.
    • ವರ್ತನೆಯು ವೈಯಕ್ತಿಕ ವ್ಯತ್ಯಾಸಗಳಿಂದಾಗಿ ನಿಶ್ಚಯವಾಗುತ್ತವೆ.
    • ವರ್ತನೆಯು ಸಾಮಾನ್ಯತೆಗಳಿಂದಲೂ ಪ್ರಭಾವಿತವಾಗಿರುತ್ತದೆ.
    • ವರ್ತನೆಯು ನಿರ್ದಿಷ್ಟ ಗುರಿ ಮತ್ತು ಉದ್ದೇಶದಿಂದ ಪ್ರಭಾವಿತವಾಗಿರುತ್ತದೆ.
    • ವರ್ತನೆಯನ್ನು ಸಾಕಷ್ಟು ಮಟ್ಟಕ್ಕೆ ಹೆಚ್ಚಿನ ಪ್ರಮಾಣಕ್ಕೆ ಬದಲಾಯಿಸಬಹುದು.
    • ವರ್ತನೆಯು ಸಾಕಷ್ಟು ಮಟ್ಟಕ್ಕೆ ಸಕ್ರಿಯ, ಅಂತೆಯೆ ಸ್ಥಾಯಿಯೂ ಆಗಿರುತ್ತದೆ.
    • ವರ್ತನೆಯನ್ನು ಬಹು ಮಟ್ಟಕ್ಕೆ ಪ್ರವಾದಿಸಬಹುದು.
    • ವರ್ತನೆಯು ಹಿಂದಿನ ಅನುಭವಗಳಿಂದ ಪ್ರಭಾವಿತವಾಗಿರುತ್ತದೆ.
    ವ್ಯವಹಾರ ವರ್ತನೆಯನ್ನು ನಮ್ಮ ಅನುಭವಗಳನ್ನು ಮೆಲುಕು ಹಾಕಿ, ಅದರ ಬೆಳಕಿನಲ್ಲಿ ನಮ್ಮ ಇಂದಿನ ಅನುಭವಗಳನ್ನು ನೋಡಿದಾಗ ಮಾತ್ರ ಅರ್ಥೈಸ ಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ಯಾವುದೇ ಸುಲಭ ವಿಧಾನವಿಲ್ಲ. ಮನುಷ್ಯನ ಆಧಾರಿತ ಈ ಅಧ್ಯಯನವು ನಮ್ಮಂತೆಯೇ ಜಟಿಲ ಮತ್ತು ನುಣುಚಾದದು.

    ಆಂಗ್ಲ ಅಂಕಣ:

  • ವ್ಯವಹಾರ ಪ್ರತಿಕೃತಿ – ವಿತರಣೆ (ಡಿಸ್ಟ್ರಿಬ್ಯೂಶನ್)

    ಫ್ರಾಂಚೈಸಿಯ ಹಿಂದಿನ ಅಂಕಣದಲ್ಲಿ ವಿಸ್ತರಣೆಯ ಒಂದು ಪದ್ಧತಿಯನ್ನು ತಿಳಿದುಕೊಂಡೆವು. ವ್ಯವಹಾರಗಳ ಸಮಸ್ಯೆಯಾದ ವಿಸ್ತರಣೆ ಬಗ್ಗೆ ಇಂದಿನ ಅಂಕಣದಲ್ಲಿ ತಿಳಿದುಕೊಳ್ಳೊಣ.

    ಕಾರ್ಖಾನೆಗಳಲ್ಲಿ ತಯಾರಿಸಿದ ವಸ್ತುಗಳು ನಮ್ಮ ಮನೆಯ ಹತ್ತಿರದ ಅಂಗಡಿಗಳಲ್ಲಿ ದೊರಕಬೇಕಾದರೆ ವಿತರಣೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ತಯಾರಾದ ವಸ್ತುವು ಸರಿಯಾದ ಸಮಯದಲ್ಲಿ, ನಿಗದಿತ ಸ್ಥಳಕ್ಕೆ ತಲುಪಿಸುವಲ್ಲಿ ವಿತರಣೆಯ ಹೊಣೆಯೊತ್ತ ವ್ಯವಹಾರಗಳು ಬಹು ಪ್ರಮುಖ ಪಾತ್ರವಹಿಸುತ್ತವೆ.

    ವ್ಯವಹಾರ ಜಗತ್ತಿನಲ್ಲಿ ವಿತರಣೆಯ ಕಂಪನಿಗಳು ನಿರ್ವಹಿಸಿರುವ ಪಾತ್ರ ಬಹು ಶ್ಲಾಘನೀಯವಾದುವು – ವಿತರಣ ಜಗತ್ತಿನಲ್ಲಿ ಯಾವುದಾದರು ಹೊಸ ಬೇಳವಣಿಗೆ ನಡೆದಲ್ಲಿ, ಅದು ಕೇವಲ ವಿತರಣಾ ವ್ಯವಹಾರಗಳಿಗಷ್ಟೆಯಲ್ಲದೆ ಕಾರ್ಖಾನೆಗಳು, ವರ್ತಕರು, ಗ್ರಾಹಕರು ಮುಂತಾದ ಎಲ್ಲಾ ಪಾಲುದಾರತಿಗೂ ಅನುಕೂಲವಾಗುತ್ತದೆ.

    ವಿತರಣಾ ಜಗತ್ತಿನಲ್ಲಿ ನಾವೀನ್ಯತೆಯನ್ನು ತಂದುಕೊಂಡು ಪ್ರಶಂಸೆಗೆ ಪಾತ್ರರಾದ ಕಂಪನಿಗಳಲ್ಲಿ – “ಡೆಲ್” ಕಂಪ್ಯುಟರ್ಸ್, ಮತ್ತು “ಫೆಡೆಕ್ಸ್” ಮುಂಚೂಣಿಯಲ್ಲಿವೆ. ಇವುಗಳ ಸಫಲತೆಯು ವಿತರಣಾ ಜಗತ್ತಿನ ಮಾದರಿಯಾಗಿವೆ.

    ವಿತರಣೆಯ ಪ್ರತಿಕೃತಿಗಳನ್ನು ಸಾರಂಶರೂಪದಲ್ಲಿ ಪ್ರಸ್ತಾಪಿಸುವುದು ಕಷ್ಟಸಾದ್ಯವಾದ ಕೆಲಸ ಆದ್ದರಿಂದ, ಇವುಗಳ ಬಗ್ಗೆ ವಿಸ್ತಾರವಾಗಿ ಮುಂದೊಮ್ಮೆ ಚರ್ಚಿಸೋಣ.

    ಆಂಗ್ಲ ಅಂಕಣವನ್ನು ಓದಿ:

  • ಬೇಡಿಕೆ ಮತ್ತು ಪೂರೈಕೆ ಚರ್ಚೆ – ೬

    ಬೇಡಿಕೆ ಮತ್ತು ಪೂರೈಕೆಯ ಉಪನಿಯಮಗಳ ಅಧ್ಯಾಯನದಲ್ಲಿ, ಹಿಂದಿನ ವಾರ ಬೇಡಿಕೆ ತಟಸ್ಥವಾಗಿದ್ದು, ಪೂರೈಕೆ ಹೆಚ್ಚಿದಾಗ ಸಮಾನಾಂತರ ಬೆಲೆ ಇಳಿಯುವುದು ಎಂದು ತಿಳಿದುಕೊಂಡೆವು. ಇಂದಿನ ಅಂಕಣದಲ್ಲಿ ಬೇಡಿಕೆ ಮತ್ತು ಪೂರೈಕೆ ಇನ್ನೊಂದು ಉಪನಿಯಮವನ್ನು ತಿಳಿದುಕೊಳ್ಳೊಣ.

    ನಿಂಬೆಹಣ್ಣಿನ ಉದಾಹರಣೆಯನ್ನೇ ಮುಂದುವರೆಸುತ್ತಾ – ವರ್ತಕನಿಗೆ ಪ್ರತೀಬಾರಿ ೫ ಮೂಟೆಗಳ ಬೇಡಿಕೆ ಇರುತ್ತದೆ ಎಂದುಕೊಳ್ಳೊಣ. ಈ ಬಾರಿಯ ಬೆಳೆಯು ಕೊನೆಯ ಸಮಯದಲ್ಲಿ ಹುಳಗಳ ಕಾಟಕ್ಕೆ ಸಿಕ್ಕಿ ಸಾಕಷ್ಟು ಬೆಳೆ ನಾಶವಾಯಿತು. ಇದರಿಂದ, ೫ ಮೂಟೆಗಳ ಬದಲಾಗಿ, ಕೇವಲ ೩ ಮೂಟೆಯಷ್ಟು ಪಡೆಯಬಹುದಾಯಿತು. ಆದರೆ, ವರ್ತಕನಿಗೆ ಬೇಡಿಕೆ ಅಷ್ಟೇಯಿತ್ತು; ಇದನ್ನು ಕಂಡು, ಆತನು ನಿಂಬೇಹಣ್ಣಿನ ಬೆಲೆಯನ್ನು ಹೆಚ್ಚಿಸಿದ. ಯಾರು ತಮ್ಮ ಬಳಿ ಇದ್ದ ಹಣಕ್ಕಿಂತ ಹೆಚ್ಚು ನಿಂಬೆಹಣ್ಣಿಗೆ ಬೆಲೆ ನೀಡುತ್ತಾರೊ ಅವರು ಮಾತ್ರ ಖರೀದಿಸುತ್ತಾರೆ, ಉಳಿದವರು ಖರೀದಿಸುವುದಿಲ್ಲ.

    ಇದನ್ನು ನಿಯಮವನ್ನಾಗಿಸಿದಾಗ – “ಬೇಡಿಕೆ ತಟಸ್ಥವಾಗಿದ್ದು, ಪೂರೈಕೆಯು ಕೆಳಗೆ ಬಿದ್ದಲ್ಲಿ, ಸಮಾನಾಂತರ ಬೆಲೆಯು ಏರುವುದು.”

  • ವ್ಯವಹಾರ ಮತ್ತು ಸಮಾಜ – ಭಾಗ ೧

    ೨೦ ವರ್ಷಗಳ ಹಿಂದೆ ನಡೆದ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ಸರ್ಕಾರವು ಮುಕ್ತ ಮಾರುಕಟ್ಟೆಯ ನೀತಿಯನ್ನು ಅನುಸರಿಸಲು ಪ್ರಾರಂಭಿಸಿದರು. ಇದರಿಂದ ಮುಂಚೆ ಸರ್ಕಾರವೇ ಕಾರ್ಖಾನೆಗಳನ್ನು ಮುಂತಾದವುಗಳನ್ನು ನಿರ್ಮಿಸಿ ಅದರ ಸುತ್ತಲೂ ಕಾರ್ಮಿಕರಿಗೆ ಮನೆಗಳು, ಶಾಲೆಗಳು ಮುಂತಾದವುಗಳನ್ನು ನಿರ್ಮಿಸಿ ತನ್ನದೇಯಾದ ಒಂದು ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಿದ್ದರು.

    ನನ್ನ ಅನುಭವದಂತೆ, ಮುಕ್ತ ಆರ್ಥಿಕತೆ ಹೆಚ್ಚಿದಂತೆ ಈ ಕಾರ್ಖಾನೆಗಳು ತಮ್ಮ ಸ್ವಾಭಾವಿಕ ಸಾವಿನೆಡೆಗೆ ಹೊಗುತ್ತಿದ್ದಂತೆ ಇದರ ಸುತ್ತಲು ಬೆಳೆದಿದ್ದ ಸಾಮಾಜಿಕ ಪದ್ಧತಿ ಮತ್ತು ಸಮಾಜ ಕಾಣೆಯಾಗ ತೊಡಗಿತು. ಭಾರತಕ್ಕೆ ಬರುತ್ತಿದ್ದ ಬಹು ರಾಷ್ಟ್ರಿಯ ಕಂಪನಿಗಳು, ಸರಕಾರದ ಕಂಪನಿಗಳು ನಡೆಸುತ್ತಿದ್ದ ಸಾಮಜಿಕ ಜವಾಬ್ದಾರಿಯನ್ನು ಪರಿಗಣಿಸದೆ, ಹೆಚ್ಚಾಗಿ ಆದಾಯವನ್ನೆ ಗಳಿಸುವುದನ್ನು ನೋಡಿದರು.

    ಬಹುರಾಷ್ಟ್ರಿಯ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕೇವಲ ಸಿ.ಎಸ್.ಆರ್ ಗೆ ಮೀಸಲಿಟ್ಟಿರುವುದನ್ನು ನೊಡಿದ್ದೇವೆ. ಇಂತಹ ಸಿ.ಎಸ್.ಆರ್ ಕಾರ್ಯಗಳು ಸಹ ಸಾಮಾಜಿಕ ಜವಾಬ್ದಾರಿಗಳಿಗಿಂತ ಹೆಚ್ಚಾಗಿ ಕಂಪನಿಗಳು ತಮ್ಮ “ಮಾರ್ಕೆಟಿಂ”ಗೆ ಉಪಯೋಗಿಸುತ್ತಿದ್ದರೆ.

    ವ್ಯವಹಾರಗಳು ಸಮಾಜದ ಬೆಂಬಲವಿಲ್ಲದೆ ನಡೆಯುವುದು ಅಸಾಧ್ಯ, ಹೀಗಿದ್ದಲ್ಲಿ, ಅವುಗಳ ಸಮಾಜದ ಪ್ರತಿ ತಮ್ಮ ಹೊಣೆಯನ್ನು ಹೆಚ್ಚು ಧೃಢತೆಯಿಂದ ನಡೆಸಬೇಕು.

    ಇಂತಹ ವಿಚಾರಗಳ ಚರ್ಚೆ ಬಹು ಮುಖ್ಯವಾದುದು – ನಮ್ಮ ಚರ್ಚೆ ವೇದಿಕೆಯಲ್ಲಿ ಇದರ ಮೇಲೊಂದು ಚರ್ಚೆಯನ್ನು ಆರಂಭಿಸುವೆವು. ಭಾಗವಹಿಸಬೇಕಾಗಿ ವಿನಂತಿ.

  • ವ್ಯವಹಾರಿಕ ವರ್ತನೆ ಚರ್ಚೆ – ೧

    ಸಂಸ್ಥೆಯ ಬೆಳವಣಿಗೆಯಲ್ಲಿ, ಮಾನವ ಸಂಪನ್ಮೂಲ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಈ ಹಿಂದೆ ತಿಳಿದುಕೊಂಡೆವು. ಮನುಷ್ಯನ ಸ್ವಭಾವ ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿ ಮನುಷ್ಯನ “ಅಹಂ” ಬಗ್ಗೆ ತಿಳಿದುಕೊಂಡೆವು. ಸಂಸ್ಥೆಯಲ್ಲಿ ಮನುಷ್ಯನ ವರ್ತನೆಯನ್ನು ಅಧ್ಯಯನ ಮಾಡಿದಾಗ ಸಾಕಷ್ಟು ಅಂಶಗಳು ಹೊರ ಬರುತ್ತವೆ – ಇದನ್ನೆ ವ್ಯವಹಾರಿಕ ವರ್ತನೆಯೆಂದು (ಆರ್ಗನೈಸೇಶನಲ್ ಬಿಹೇವಿಯರ್) ಕರೆಯುತ್ತೇವೆ.

    ಪ್ರಬಂಧಕರು ವ್ಯವಹಾರಿಕ ವರ್ತನೆಯ ಮೂಲಕ ಸಂಸ್ಥೆ ಮತ್ತು ಉದ್ಯೊಗಿಗಳ ನಡುವಿನ ಸಂಬಂಧದಿಂದ ತಿಳಿದು ಸಂಸ್ಥೆಯ ಧ್ಯೇಯಗಳನ್ನು ಸಾಧನೆಯನ್ನು ಸರಿಯಾಗಿ ತಿಳಿದುಕೊಳ್ಳಬಹುದು. ವ್ಯವಹಾರಿಕ ವರ್ತನೆಯಲ್ಲಿ ಎರಡು ವಿಧಗಳು
    ಸೂಕ್ಷ್ಮ ವ್ಯವಹಾರಿಕ ವರ್ತನೆ: ಉದ್ಯೊಗಿಗಳ ವರ್ತನೆ ಇಂದ ಸಂಸ್ಥೆಯ ಮೆಲಿನ ಪರಿಣಾಮದ ಅಧ್ಯಯನ
    ಸ್ಥೂಲ ವ್ಯವಹಾರಿಕ ವರ್ತನೆ: ಸಂಸ್ಥೆಯು ಉದ್ಯೋಗಿಗಳ ಮೇಲೆ ಬೀರುವ ಪ್ರಭಾವ.

    ವ್ಯವಹಾರಿಕ ವರ್ತನೆಯ ಬಗ್ಗೆ ತಿಳಿದುಕೊಳ್ಳಲು ಪ್ರಬಂಧಕನು ಆತನು ದಿನನಿತ್ಯ ನೋಡುವ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳಬೇಕು, ನಿರ್ದೇಶಿಸಬೇಕು, ನಿಗ್ರಹಿಸಬೇಕು ಮತ್ತು ಇವುಗಳಿಂದ ಮುಂಬರುವ ಸನ್ನಿವೇಶವನ್ನು ಊಹಿಸಬೇಕು. ಇದರಂತೆ ವ್ಯವಹಾರಿಕ ವರ್ತನೆಯು ಪ್ರಯತ್ನದಿಂದ ಸಾಧಿಸಬೇಕಾದ ಕೌಶಲ್ಯವೆನ್ನುವುದು ಖಚಿತವಾಗುತ್ತದೆ.

    ಇಂತಹ ಮಾನವ ಸಂಪನ್ಮೂಲದ ಪ್ರಬಂಧನೆಯ ಬಹು ಮುಖ್ಯ ಅಂಗವಾದ ವ್ಯವಹಾರಿಕ ವರ್ತನೆಯ ಬಗ್ಗೆ ಮುಂಬರುವ ಅಂಕಣಗಳಲ್ಲಿ ತಿಳಿದುಕೊಳ್ಳೋಣ.

  • ವ್ಯವಹಾರ ಪ್ರತಿಕೃತಿ – ಫ್ರಾಂಚೈಸಿ

    ವ್ಯವಹಾರ ಪ್ರತಿಕೃತಿಯ ಹಿಂದಿನ ಅಂಕಣದಲ್ಲಿ ಫ್ರೀಮಿಯಂ ಪ್ರತಿಕೃತಿಯ ಬಗ್ಗೆ ಚರ್ಚಿಸಿದ್ದೆವು. ಇಂದಿನ ಅಂಕಣದಲ್ಲಿ ಫ್ರಾಂಚೈಸಿಯ ಬಗ್ಗೆ ತಿಳಿದುಕೊಳ್ಳೊಣ.

    ಸರ್ವೇ ಸಾಮಾನ್ಯವಾಗಿ ಕಂಡುಬರುವ – “ಕೆಫೆ ಕಾಫಿ ಡೇ”ಯು ಬೆಳೆಯಲು, ಫ್ರಾಂಚೈಸಿ ಪ್ರತಿಕೃತಿಯನ್ನೇ ಉಪಯೋಗಿಸಿದೆ. ಅದನ್ನು ಇಂದು ಎಲ್ಲ ಪಟ್ಟಣಗಳಲ್ಲೂ ಕಾಣಬಹುದೆಂದರೆ ಫ್ರಾಂಚೈಸಿಯೇ ಮುಖ್ಯ ಕಾರಣ.

    ಯಾವುದೇ ಫ್ರಾಂಚೈಸಿಯಲ್ಲಿ ಮುಖ್ಯವಾಗಿ ಎರಡು ಪಕ್ಷಗಳಿವೆ – ಫ್ರಾಂಚೈಸಿ ನೀಡುವವ (ಫ್ರಾಂಚೈಸರ್) ಮತ್ತೆ ಫ್ರಾಂಚೈಸಿ ಪಡೆಯುವವ (ಫ್ರಾಂಚೈಸೀ).

    ಯಾವುದೇ ಫ್ರಾಂಚೈಸಿಯು ಅದರ ಒಪ್ಪಂದದ ಪರಿಮಿತಿಯಲ್ಲೇ ಕಾರ್ಯ ನಿರ್ವಹಿಸ ಬೇಕಾಗುತ್ತದೆ. ಈ ಒಪ್ಪಂದದಲ್ಲಿ ವ್ಯವಹಾರಕ್ಕೆ ಸಂಬಂಧಪಟ್ಟ ರೂಪರೇಷೆಗಳು, ಕರ್ತವ್ಯಗಳು ಮತ್ತು ಇತರೆ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುತ್ತಾರೆ.

    ಫ್ರಾಂಚೈಸಿಯ ಅನುಕೂಲ ಅನಾನುಕೂಲಗಳನ್ನು ಪರಿಶೀಲಿಸಿದಲ್ಲಿ – ಅನುಕೂಲಗಳು ಕೇಳಗಿನಂತಿವೆ; ಬೇಗ ವ್ಯವಹಾರವನ್ನು ವಿಸ್ತರಿಸ ಬಹುದು, ಬಂಡವಾಳವು ಹಲವಾರು ಜನರಲ್ಲಿ ಹಂಚಿರುತ್ತದೆ. ಆಗಲೇ ಸಿದ್ಧವಾದ ವ್ಯವಹಾರ ಪ್ರತಿಕೃತಿಯು ಇರುವುದರಿಂದ ಆದಾಯವು ಸುಲಭವಾಗಿ ಪಡೆಯಬಹುದು. ಬ್ರ್ಯಾಂಡ್ ಹೆಸರು ಕೂಡದೊರಕುತ್ತದೆ. ಇದರ ಅನಾನುಕೂಲವೆಂದರೆ,
    ಫ್ರಾಂಚೈಸಿಯ ಸಮಯ ಮುಗಿದಾಕ್ಷಣ ಫ್ರಾಂಚೈಸೀಯು ವ್ಯವಹಾರಕ್ಕೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

    ಫ್ರಾಂಚೈಸಿ ಪ್ರತಿಕೃತಿಯು ಅತ್ಯಂತ ಹೆಚ್ಚಾಗಿ “ಹೊಟೆಲ್” ಉದ್ಯಮದಲ್ಲಿ ಉಪಯೋಗಿಸುದನ್ನು ಕಾಣಬಹುದು.

    ಆಂಗ್ಲ ಅಂಕಣ: http://somanagement.blogspot.com/2011/03/business-model-franchise.html

  • ಬೇಡಿಕೆ ಮತ್ತು ಪೂರೈಕೆಯ ಚರ್ಚೆ – ೫

    ಬೇಡಿಕೆ ಮತ್ತು ಪೂರೈಕೆಯ ಈ ಹಿಂದಿನ ಅಂಕಣದಲ್ಲಿ, ಪೂರೈಕೆಯು ತಟಸ್ಥ ಮಟ್ಟದಲ್ಲಿದ್ದು, ಬೇಡಿಕೆಯು ಕಮ್ಮಿಯಾದರೆ ಸಮಾನಾಂತರ ಬೆಲೆಯು ತಗ್ಗುವುದೆಂದು ತಿಳಿದುಕೊಂಡೆವು. ಇಂದಿನ ಅಂಕಣದಲ್ಲಿ, ಮುಂದುವರೆದು ಇನ್ನೊಂದು ಹೊಸ ನಿಯಮವನ್ನು ತಿಳಿದುಕೊಳ್ಳೋಣ.

    ಹಿಂದಿನ ಅಂಕಣದಲ್ಲಿ ಉದಾಹರಣೆಯಾಗಿ ತೆಗೆದುಕೊಂಡಂತೆ ಈ ಬಾರಿಯೂ ನಿಂಬೇಹಣ್ಣನ್ನು ತೆಗೆದು ಕೊಳ್ಳೋಣ. ವರ್ತಕನು ತನ್ನ ಹಿಂದಿನ ಅನುಭವವನ್ನು ನೆನೆಪಿಟ್ಟು, ಈ ಬಾರಿ ಹೊಸದೊಂದು ತಂತ್ರವನ್ನು ಉಪಯೋಗಿಸಿದನು. ಪ್ರತೀ ಎರಡು ಘಂಟೆಗೊಮ್ಮೆ ೫೦ ನಿಂಬೆಗಳ ಒಂದು ಚೀಲವನ್ನು ತಂದುಕೊಡುವಂತೆ ತನ್ನ ಕಾರ್ಮಿಕರಿಗೆ ನಿರ್ದೇಶಿಸಿದ್ದನು. ದಿನದ ಘಂಟೆಗಳು ಜರುಗಿದಂತೆ, ಘಂಟೆಗೆ ಸುಮಾರು ೨೦ ಜನರು ಬರುತಿದ್ದುದನ್ನು ಗಮನಿಸಿದ್ದನು. ಸುಮಾರು ೩ ಘಂಟೆ ಸಂಜೆಯ ವೇಳೆಗೆ, ಕಡೆಯ ನಿಂಬೇಹಣ್ಣಿನ ಮೂಟೆ ಬಂದದನ್ನು ಗಮನಿಸಿದ. ಎಲ್ಲೆವನ್ನೂ ಮಾರುವ ನಿಶ್ಚಯ ಮಾಡಿದ್ದ ಆತನು ತನ್ನ ಎಲ್ಲ ನಿಂಬೆಹಣ್ಣುಗಳ್ಳನ್ನು ಮಾರಲೆಂದು ಪ್ರತೀ ನಿಂಬೇಹಣ್ಣಿನ ಬೆಲೆಯನ್ನು ಕಡಿಮೆಗೊಳಿಸಿದ. ಕಡಿಮೆ ಬೆಲೆಯಾದಾಗ ಹೆಚ್ಚು ಪದಾರ್ಥಗಳನ್ನು ಕೊಳ್ಳಬಹುದೆಂಬ ನಿಯಮವನ್ನು ಈಗಾಗಲೆ ತಿಳಿದುಕೊಂಡಿದ್ದೇವೆ.

    ಈ ಮೇಲಿನ ಉದಾಹರಣೆಯನ್ನು ಅಧ್ಯಾಯನ ಮಾಡಿದಾಗ, ಬೇಡಿಕೆ ಮತ್ತು ಪೂರೈಕೆಯ ಹೊಸದೊಂದು ನಿಯಮ ನಮ್ಮ ಅರಿವಿಗೆ ಬರುತ್ತದೆ – ಬೇಡಿಕೆ ತಟಸ್ಥವಾಗಿದ್ದು, ಪೂರೈಕೆಯು ಹೆಚ್ಚುತ್ತಾಹೋದಲ್ಲಿ, ಇದರ ಸಮಾನಾಂತರ ಬೆಲೆಯು ಕುಸಿಯುವುದು.

  • ಎಂಟ್ರಪ್ರೆನ್ಯೂರ್ ಇಂದ ಬೆಳೆದಿರುವ ವ್ಯವಹಾರದೆಡೆಗೆ

    ಎಂಟ್ರಪ್ರೆನ್ಯೂರ್ಶಿಪ್ಪಿನ ಯಾತ್ರೆಯು ಕಲ್ಪನೆಯುಂದ ಶುರುವಾಗಿ, ಬೆಳೆಯುತ್ತಾ ಮುಂದುವರೆದು ಸಫಲ ವ್ಯವಹಾರವಾಗಿ ಸ್ಥಾಪಿತವಾಗುತ್ತದೆ. ಇಂದಿನ ಅಂಕಣದಲ್ಲಿ, ಈ ಯಾತ್ರೆಯಲ್ಲಿ ಕಂಡುಬರುವ ವಿಶೇಷಗಳು ಮತ್ತು ವ್ಯತ್ಯಾಸಗಳನ್ನು ತಿಳಿಯಪಡಿಸಲು ಇಚ್ಛಿಸುತ್ತಿದ್ದೇನೆ. ಈ ಯಾತ್ರೆಯನ್ನು ಮೂರು ಭಾಗಗಳನ್ನಾಗಿ ವಿಭಾಗಿಸಬಹುದು.
    ೧. ಪ್ರಾರಂಭ
    ೨. ಚಿಗುರು ವ್ಯವಹಾರ
    ೩. ಬೆಳೆದ ವ್ಯವಹಾರ

    ಪ್ರಾರಂಭ: ಎಂಟ್ರಪ್ರೆನ್ಯೂರ್ಶಿಪ್ಪಿನ ಪ್ರಾರಂಭದಲ್ಲಿ ಎಂಟ್ರಪ್ರೆನ್ಯೂರ್ ಒಂದು ಕನಸಿನೊಂದಿಗಾಗುತ್ತದೆ. ಆತನಿಗೆ ಮಾರ್ಗದರ್ಶನ ನೀಡಲು ಯಾರೂ ಇರಲಾರರು, ಪದ್ಧತಿಗಳಿರುವುದಿಲ್ಲ. ಒಂದೇ ಸಮಯದಲ್ಲಿ ಹಲವಾರು ಕಾರ್ಯಗಳನ್ನು ಮಾಡುತ್ತಿರುತ್ತಾನೆ. ವ್ಯವಹಾರವು ಅತ್ಯಂತ ಮೃದುವಾಗಿದ್ದು, ಅದನ್ನು ಬೇಕಾದ ಹಾಗೆ ರೂಪಿಸಬಹುದು – ಕೇವಲ ಹೊಸ ಪದ್ಧತಿಗಳ ಮೂಲಕ ಮಾತ್ರವಲ್ಲ, ಸಾಧಿಸಬೇಕೆಂಬ ಧ್ಯೇಯ ಕೂಡ ಪರಿವರ್ತನೆಗೊಳಾಗಾಗಬಹುದು. ಹೆಚ್ಚಾಗಿ ಈ ಸ್ಥಿತಿಯಲ್ಲಿ ಇದೆಲ್ಲವೂ ಒಂದೇ ಮನುಷ್ಯನ ಕಾರ್ಯವಾಗಿರುತ್ತದೆ.

    ಚಿಗುರು ವ್ಯವಹಾರ: ಈ ಸ್ಥಿತಿಯಲ್ಲಿ ಎಂಟ್ರಪ್ರೆನ್ಯೂರ್ ನ ಒಟ್ಟಿಗೆ ಆತನ ತಂಡವು ಇರುತ್ತದೆ. ಆತನ ಧ್ಯೇಯವು ಮುಂದುವರೆದು ಆತನ ತಂಡದ ಸದಸ್ಯರಿಗೆಲ್ಲಾ ತಿಳಿಸುತ್ತಾನೆ. ಒಬ್ಬನೇ ಎಲ್ಲಾಕಾರ್ಯಗಳನ್ನು ಮಾಡುವುದನ್ನು ಕಡಿಮೆ ಮಾಡಿ ತನ್ನ ತಂಡದ ಸದಸ್ಯರಿಗೆಲ್ಲ ಕಾರ್ಯವಿಂಗಡನೆಯಿಂದ ಸಾಧಿಸುವ ಪ್ರಯತ್ನ ನಡೆಯುತ್ತದೆ. ಎಂಟ್ರಪ್ರೆನ್ಯೂರ್ ಒಟ್ಟಿಗೆ ಸಂಪರ್ಕ ಹೆಚ್ಚಿರುತ್ತದೆ. ಕಾರ್ಯದ ಧ್ಯೇಯ ನಿರ್ಧರಿತವಾಗಿದ್ದರೂ ಅದನ್ನು ಸಾಧಿಸಲು ಬೇಕಾಗುವ ಪದ್ಧತಿಯು ಪರಿವರ್ತನೆಯಾಗುತ್ತಲೇ ಇರುತ್ತದೆ. ಧ್ಯೇಯ ದೃಢವಾಗಿದ್ದು, ಪದ್ಧತಿಗಳು ಅದರ ಸುತ್ತ ಬೆಳೆಯುತ್ತವೆ. ಕಾರ್ಯಕರ್ಮಿಗಳಲ್ಲಿ ರಾಜಕೀಯ ಮನೋಭಾವ ನಿಧಾನವಾಗಿ ಬೇರೂರ ತೊಡಗುತ್ತದೆ.

    ಬೆಳೆದ ವ್ಯವಹಾರ: ವ್ಯವಹಾರ ಬೆಳೆದಿರಲು, ವ್ಯವಹಾರಕ್ಕೆ ಎಂಟ್ರಪ್ರೆನ್ಯೂರ್ ನ ಅವಶ್ಯಕತೆ ಕಡಿಮೆಯಾಗುತ್ತದೆ. ತಂಡವು ಅದರಷ್ಟಕ್ಕೆ ಬೆಳೆಯುತ್ತಾ ಹೋಗುವುದು. ತನ್ನದೆಯಾದ ಪದ್ಧತಿಗಳು, ನಿಯಮಗಳು, ರೂಪರೇಷೆಗಳನ್ನೆಲ್ಲಾ ಸೃಷ್ಟಿಸಿ ತನ್ನ ಧ್ಯೇಯದೆಡೆಗೆ ಒಯ್ಯುವರು. ಸರಳತೆಯು ಕಳೆದು ಅದರ ಬದಲಿಗೆ ಹೆಚ್ಚು ಕಠಿನ ಕ್ರಮಗಳು ಹೆಚ್ಚುತ್ತವೆ. ಕಾರ್ಯಕರ್ಮಿಗಳಲ್ಲಿ ರಾಜಕೀಯ ಮನೋಭಾವ ಹೆಚ್ಚಾಗುತ್ತದೆ.

    ಇಂತಹ ವಿಷಯಗಳನ್ನು ಅಧ್ಯಯನ ಮಾಡುವ ಪ್ರಬಂಧವನ್ನು – ಆರ್ಗನೈಶನ್ ಡೆವಲೆಪ್ಮೆಂಟ್ ಎನ್ನುತ್ತಾರೆ.

  • ಮಾನವ ಸಂಪನ್ಮೂಲ: “ಇಗೊ” ಅಹಂಕಾರ

    ಮಾನವ ಸಂಪನ್ಮೂಲದ ಈ ಹಿಂದಿನ ಅಂಕಣದಲ್ಲಿ, ಅದರ ಮಹತ್ವ ಮತ್ತು ಕಂಪನಿಗಳು ಅದನ್ನು ತಮ್ಮ ಬ್ರಹ್ಮಾಸ್ತ್ರವನ್ನಾಗಿ ಉಪಯೋಗಿಸಬಹುದೆಂದು ತಿಳಿದುಕೊಂಡೆವು. ಮನೋವಿಜ್ಞಾನವು ಮಾನವ ಸಂಪನ್ಮೂಲದ ಬಹು ಮುಖ್ಯ ಆಧಾರ ಸ್ತಂಭಗಳಲ್ಲಿ ಒಂದು. ನಾನು ಎನ್ನುವುದನ್ನು ಮಾನವ ಸಂಪನ್ಮೂಲ, “ಇಗೊ”ಎನ್ನುವುದನ್ನು ಪದವನ್ನು ಸರ್ ಸಿಗ್ಮಂಡ್ ಫ್ರೊಯ್ಡ್ ಮೊಟ್ಟಮೋದಲ ಬಾರಿಗೆ ಪ್ರಸ್ತಾಪಿಸಿದರು. ಮನೋವಿಜ್ಞಾನದ ಈ ಅರ್ಥವನ್ನು ಬೇರೆ ಅಂಕಣದಲ್ಲಿ ತಿಳಿದುಕೊಳ್ಳೋಣ.

    ಈ ಅಂಕಣಕ್ಕೆ ಬೇಕಾದ “ಇಗೊ” (ಅಹಂಕಾರ) ಅರ್ಥವು – ನಮ್ಮ ಬಗ್ಗೆ ನಾವೇ ಸೃಷ್ಟಿಸಿಕೊಂಡಿರುವ ಕಲ್ಪನಾತ್ಮಕ ಪ್ರತಿಬಿಂಬ. ನಮ್ಮ ಸಾಧನೆಗಳಿಂದ ಈ ಬಿಂಬವು ಹೆಚ್ಚು ಗಾಢವಾಗುತ್ತದೆ. ಈ ಪ್ರಕ್ರಿಯೆಯು ಮುಂದುವರೆದಂತೆ, ಮಾನವನಾದವನು ತನ್ನದೇಯಾದ ಕಲ್ಪನಾತ್ಮಕ ವಲಯವನ್ನು ಬೆಳೆಸತೊಡಗುತ್ತಾನೆ; ಕಾಲಕ್ರಮೇಣ ಈ ವಲಯವು ನನ್ನದೇ, ಆರಲ್ಲಿ ನಾನೇ ಸಾರ್ವಭೌಮನೆಂದುಕೊಳ್ಳುತ್ತನೆ. ಆತನು ತನ್ನದೇಯಾದ ಲೋಕದಲ್ಲಿರುತ್ತನೆ, ಅವನು ಕೆಲವೇ ಸ್ನೆಹಿತರ, ಸಂಬಂಧಿಗಳೊಡನೆ ಸಂಪರ್ಕವನ್ನು ಸೀಮಿತಗೊಳಿಸುತ್ತಾನೆ. ಆತನಲ್ಲಿದ್ದ ವಿಶಾಲ ಮನೋಭಾವವು ಸಂಕುಚಿತವಾಗತೊಡಗುತ್ತದೆ. ಈ ಪರಿವರ್ತನೆಯೇ ಕಂಪನಿಗಳಲ್ಲಿ ಕಾಣುವ ಹಲವಾರು ಕಿತ್ತಾಟಕ್ಕೆ ಕಾರಣವಾಗಿದೆ.

    ಮಾನವರ ಸರ್ವೆಸಾಮನ್ಯವಾದ ಈ “ಇಗೊ”ವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ, ಮಾನವ ಸಂಪನ್ಮೂಲವನ್ನು ಕಂಪನಿಯ ಏಳಿಕೆಗೆ ಪ್ರೊತ್ಸಹಿಸುವುದು ಸುಲಭವಾಗುತ್ತದೆ.