Category: Kannada ಕನ್ನಡ

  • ಬೇಡಿಕೆ ಮತ್ತು ಪೂರೈಕೆ ಚರ್ಚೆ – ೪

    ಮುಂಚಿನ ಅಂಕಣದಿಂದ ಮುಂದುವರೆದು, ಇಂದಿನ ಅಂಕಣದಲ್ಲಿ ಇನ್ನೊಂದು ನಿಯಮವನ್ನು ತಿಳಿದುಕೊಳ್ಳೋಣ. ಹಿಂದಿನ ಉದಾಹರಣೆಯಂತೆಯೇ ಇಲ್ಲಿಯೂ ನಿಂಬೆಹಣ್ಣನ್ನು ಬಳಸಿಕೊಳ್ಳೊಣ.

    ನಿಂಬೇಹಣ್ಣಿನ ವರ್ತಕನು, ಕಳೆದಬಾರಿಯ ದುಬಾರಿ ಆದಾಯವನ್ನು ಗಮನಿಸಿ; ಈ ಬಾರಿಯು ಅಂತೆಯೆ ಆದಾಯದಲ್ಲಿ ಹೆಚ್ಚಳ ಸಿಗಬಹುದೆಂದು, ಹೆಚ್ಚಿನ ಪ್ರಮಾಣದಲ್ಲಿ ನಿಂಬೆಹಣ್ಣನ್ನು ಮಾರುಕಟ್ಟೆಗೆ ತಂದನು. ಇಡೀ ದಿನ ವ್ಯಾಪಾರಕ್ಕೆಂದು ಕೂತರೂ, ಯಾವುದೇ ವ್ಯಾಪಾರವೂ ಕುದುರಲಿಲ್ಲ. ವರ್ತಕನು ತಂದಿರುವ ನಿಂಬೆಹಣ್ಣನ್ನು ಹಿಂದಕ್ಕೆ ಒಯ್ಯುವ ಬದಲಾಗಿ ಅಂದೇ ಮಾರುವ ನಿಶ್ಚಯ ಮಾಡಿ, ನಿಂಬೆಹಣ್ಣಿನ ಬೆಲೆಯನ್ನು ₨೩.೦೦ ಇಳಿಸಿ ₨೧.೫೦ ಎಂದು ಮಾಡಿದನು. ಇದನ್ನು ಕಂಡು ಅಧಿಕ ಬೆಲೆಯಿಂದಾಗಿ ಹಿಂಜರಿತಿದ್ದ ಗ್ರಾಹಕರು ನಿಂಬೇಹಣ್ಣನ್ನು ಖರೀದಿಸಲು ಪ್ರಾರಂಭಿಸಿದರು.

    ಈ ಮೇಲ್ಕಂಡ ಸ್ಥಿತಿಯನ್ನು ಕೂಲಂಕುಷವಾಗಿ ಗಮನಿಸಿದಾಗ; ಬೇಡಿಕೆ ಮತ್ತು ಪೂರೈಕೆಯ ಮಹತ್ವದ ಇನ್ನೊಂದು ನಿಯಮ ಹೊರಬರುತ್ತದೆ – ಪೂರೈಕೆಯು ಒಂದೇಮಟ್ಟದಲ್ಲಿದ್ದು, ಬೇಡಿಕೆಯು ಕಮ್ಮಿಯಾದಲ್ಲಿ, ಸಮಾನಂತರ ಬೆಲೆಯು ಇಳಿಮುಖ ವಾಗಿರುತ್ತದೆ.

  • ಮುಖಂಡತ್ವ ಮತ್ತು ವ್ಯವಸ್ಥಾಪನೆ

    ಸಾಂಪ್ರದಾಯಿಕವಾಗಿ, ಮುಖಂಡತ್ವ ಮತ್ತು ವ್ಯವಸ್ಥಾಪಕನನ್ನು ಈ ಎರಡು ಪದಗಳ ಅಂತರವನ್ನು
    • ಪ್ರೇರಣೆಯ ವಿಧಿ
    • ಆಡಳಿತ ಆಯಕಟ್ಟು
    ಗಳಿಂದ ವಿವರಿಸಲಾಗುತ್ತದೆ.

    ಇದರಂತೆ, ಸಾಮಾನ್ಯವಾಗಿ ನೇತಾರನಾದವನು ಜನಪರವಾಗಿದ್ದರೆ, ವ್ಯವಸ್ಥಾಪಕನು ಕಾರ್ಯಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವರು. ಆದರೆ ಇಂದಿನ ಜ್ಞಾನದ ಜಗತ್ತಿನಲ್ಲಿ, ಮುಖಂಡತ್ವ ಮತ್ತು ವ್ಯವಸ್ಥಾಪಕವು ತಮ್ಮ ತಮ್ಮ ಪರಿಮಿತಿಗಳಿಂದ ಹೊರಗೆ ಹೋಗಿ ಸಕ್ರಿಯವಾಗಿ ಒಂದರೊಳಗೆ ಇನ್ನೊಂದು ಲೀನವಾಗುತ್ತಿದೆ. ನಾಯಕರು ತಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ವ್ಯವಸ್ಥಾಪಕ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಅಂತೆಯೇ, ವ್ಯವಸ್ಥಾಪಕರೂ ಸಹ ತಮ್ಮ ಸಹೋದ್ಯೋಗಿಗಳಿಂದ ಕಾರ್ಯಸಾಧಿಸಲು ತಮ್ಮದೇ ಆದ ನಾಯಕತ್ವದ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
    ನಾಯಕತ್ವದ ಶೈಲಿಯು ನಾಯಕನಿಂದ ನಾಯಕನಿಗೆ ವಿಭಿನ್ನವಾಗಿರುತ್ತದೆ, ಇದರಂತೆಯೇ ವ್ಯವಸ್ಥಾಪಕನೂ ತನ್ನದೆಯಾದ ಶೈಲಿಯನ್ನು ಅಳವಡಿಸಿ, ತನ್ನ ಅಧೀನರಾಗಿರುವ ನೌಕರರನ್ನು ಹುರಿದುಂಬಿಸಿ, ಸ್ವಯಂಪ್ರೇರಣೆಯಿಂದ ಕಾರ್ಯವನ್ನು ಸಾಧಿಸುವಂತೆ ಸ್ಪೂರ್ತಿಯನ್ನು ತುಂಬಬೇಕು.ಈ ರೀತಿಯಲ್ಲಿ ಸ್ವಯಂಪ್ರೆರಿತ ನೌಕರರು ಸಾಧಿಸುವ ಕಾರ್ಯ, ಅಧಿಕಾರದಿಂದ ವ್ಯವಸ್ಥಾಪಕನು ಹೇಳಿದ ಕಾರ್ಯಕ್ಕಿಂತಲೂ ಹಿರಿದಾಗಿರುವುದು ಖಚಿತ.

    ಇಂದಿನ ಕಂಪನಿಗಳಲ್ಲಿ ಕಾರ್ಮಿಕರ ಸವಕಳಿಗೆ ಅವರನ್ನು ನೋಡಿಕೊಳ್ಳುತ್ತಿರುವ ವ್ಯವಸ್ಥಾಪಕರು ಅಥವಾ “ಟೀಮ್ ಲೀಡ್ಸ್” ಬಹು ಮುಖ್ಯ ಕಾರಣವಾಗಿರುತ್ತಾರೆ. ಕಾರ್ಮಿಕರನ್ನು ಸರಿಯಾಗಿ ಅರ್ಥಮಾಡಿಕೊಂಡು, ಅವರನ್ನು ಹುರಿದುಂಬಿಸಿ ಕಾರ್ಯ ಸಿದ್ಧಿಯತ್ತ ಪ್ರೇರಿಸುವುದು ಈ ಜ್ಞಾನಾಧಾರಿತ ಜಗತ್ತಿನಲ್ಲಿ ಅತೀ ಮುಖ್ಯ.

  • ಮಾನವ ಸಂಪನ್ಮೂಲ ಪರಬಂಧನೆ

    ಈ ಹಿಂದೆ ಕಂಡಂತೆ ಬೇಡಿಕೆಯನ್ನು ಪೂರೈಸಲು ವ್ಯವಹಾರದ ಪ್ರತಿಕೃತಿಯನ್ನು ನಿರ್ಮಿಸಿ ಅದಕ್ಕೆ ಬೇಕಾದ ವ್ಯವಹಾರಾಂಗಗಳನ್ನು ಸೇರಿಸಿದಾಗ ವ್ಯವಹಾರದ ಕಾರ್ಯ ಪ್ರಾರಂಭವಾಗುತ್ತದೆ. ಈ ವ್ಯವಹಾರಾಂಗಗಳಲ್ಲಿ ಮಾನವ ಸಂಪನ್ಮೂಲದ ಪ್ರಬಂಧನೆ ಅತೀ ಮುಖ್ಯ. ವ್ಯವಹಾರಕ್ಕೆ ಬೇಕಾಗುವ ಉಳಿದ ಸಂಪನ್ಮೂಲಗಳನ್ನು ವ್ಯವಹಾರದ ಸ್ಪರ್ಧಿಗಳು ಕೊಂಡುಕೊಳ್ಳಬಹುದು, ಆದರೆ ಒಂದು ಕಂಪನಿಯಲ್ಲಿರುವ ಕಾರ್ಮಿಕರು ಮಾತ್ರ ಆ ಕಂಪನಿಯ ಶ್ರೆಷ್ಠತೆಯನ್ನು ಸಿದ್ಧಿಸುವಲ್ಲಿ ಸಮರ್ಥರು.

    ಮಾನವ ಸಂಪನ್ಮೂಲ ಪ್ರಬಂಧನೆಯೆಂದರೆ, ಕಂಪನಿಯನ್ನು ನಡೆಸುವಲ್ಲಿ ಸಹಕಾರಿಯಾಗಿರುವ ಕಾರ್ಮಿಕರನ್ನು ಪ್ರಭಾವಶಾಲಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ವ್ಯವಹಾರದ ಗುರಿಯೆಡೆಗೆ ಸಾಗಿಸುವುದು. ಪ್ರತಿ ಕಂಪನಿಯು ತನ್ನ ಕಾರ್ಮಿಕರಲ್ಲಿ ಇರುವ ಗುಣ ಕೌಶಲ್ಯಗಳನ್ನು ಉಪಯೋಗಿಸಿ, ಅದನ್ನು ತನ್ನ ಸ್ಪರ್ಧಾತ್ಮಕ ಮುನ್ನಡೆಗೆ ಉಪಯೊಗಿಸಬೇಕಾದಲ್ಲಿ, ಮಾನವ ಸಂಪನ್ಮೂಲ ಪ್ರಬಂಧನೆ ಬಹು ಮುಖ್ಯವಾಗುತ್ತದೆ. ಕಂಪನಿಯು ಈ ವಿಭಿನ್ನತೆಯನ್ನು ಮತ್ತು ಹಲವು ರೀತಿಯಲ್ಲಿ ತೋರಿಸ ಬಹುದು, ಕೇವಲ ಕಾರ್ಯಾಲಯದ ಒಳಗಡೆ ಮಾತ್ರವಲ್ಲ; ಅನಾನುಭವಿಗಳನ್ನು ಹುಡುಕುವಾಗವಾಗಲಿ, ಅಥವಾ ಕಾರ್ಯಾಲಯದ ನಿಯಮದಲ್ಲಾಗಲಿ, ಒಂದೇ ರೀತಿಯಲ್ಲಿ ತನ್ನ ಮಾನವ ಸಂಪನ್ಮೂಲ ಪ್ರಬಂಧನೆಯನ್ನು ತೋರಿಸಬೇಕಾಗುತ್ತದೆ.

    ಇಂದಿನ ವಿಡಂಬನೆಯೆಂದರೆ, ಈ ಅತಿ ಮುಖ್ಯವಾದ ವ್ಯವಹಾರಾಂಗಕ್ಕೆ ಉಳಿದ ವ್ಯವಹಾರಾಂಗಗಳಷ್ಟು ಪ್ರಾಮುಖ್ಯತೆ ದೊರಕುತಿಲ್ಲ. ಮಾನವ ಸಂಪನ್ಮೂಲ ಪ್ರಬಂಧನೆಯನ್ನು ಸರಿಯಾಗಿ ಮಾದರಿಯನ್ನಾಗಿ ನಿರ್ಮಿಸಿದ್ದಲ್ಲಿ ಅದರಷ್ಟು ಪರಿಣಾಮಕಾರಿಯಾದ ಸ್ಪರ್ಧಾತ್ಮಕ ವ್ಯವಹಾರಂಗ ಮತ್ತೊಂದಿಲ್ಲ. ಮಾನವ ಸಂಪನ್ಮೂಲ ಪ್ರಬಂಧನೆಯ ಬಗ್ಗೆ ಮುಂಬರುವ ಅಂಕಣದಲ್ಲಿ ಇನ್ನೂ ಆಳವಾಗಿ ತಿಳಿದುಕೊಳ್ಳೋಣ.

  • ವ್ಯವಹಾರ ಪ್ರತಿಕೃತಿ – ೩

    ಈ ಹಿಂದಿನ “ಬೈಟ್ ಅಂಡ್ ಹುಕ್” ಅಂಕಣದಲ್ಲಿ ವ್ಯವಹಾರ ಪ್ರತಿಕೃತಿಯ ನವೀನ ರೂಪ ನೋಡಿದೆವು, ಇಂದಿನ ಅಂಕಣದಲ್ಲಿ ಸರ್ವೇಸಾಮಾನ್ಯವಾದ “ಡೈರೆಕ್ಟ್ ಸೇಲ್ಸ್” ಬಗ್ಗೆ ತಿಳಿದುಕೊಳ್ಳೊಣ.

    ನಮ್ಮ ದೈನಂದಿನ ಜೀವನದಲ್ಲಿ ಎಲ್.ಐ.ಸಿ ಇತರೆ ವಿಮೆಯ ಕಂಪನಿಗಳನ್ನು ನೋಡಿರುತ್ತೆವೆ, ಅಂತೆಯೇ ಆಮ್ವೆ ಬಗ್ಗೆಯೂ ಕೇಳಿರುವ ಸಾದ್ಯತೆಯೂ ಇದೆ. ಈ ಎರಡೂ ವ್ಯವಹಾರಗಳಲ್ಲಿ ಸಮಾನವಾದುದೇನು? ಒರ್ವ ವ್ಯಕ್ತಿಯು ವೈಯಕ್ತಿಕವಾಗಿ ಭೇಟಿ ಮಾಡಿ ಅವರು ವ್ಯವಹಾರವನ್ನು ಕುದುರಿಸಲು ನೋಡುತ್ತರೆ. ಇದಕ್ಕೆ ಡೈರೆಕ್ಟ್ ಸೇಲ್ಸ್ ಎಂದು ಹೇಳುವುದು.

    ಡೈರೆಕ್ಟ್ ಸೇಲ್ಸನ್ನು ಸಾಮಾನ್ಯವಾಗಿ ವಸ್ತುವಿನ ವಿಚಾರವನ್ನು ಕೂಲಂಕುಷವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿರುವಲ್ಲಿ ಉಪಯೋಗಿಸುತ್ತಾರೆ. ಇದನ್ನು “ಏವೋನ್” ಯೆನ್ನುವ ಕಂಪನಿಯು, ೧೮೮೬ ಅಲ್ಲಿ ಉಪಯೊಗಿಸಲು ಪ್ರಾರಂಭಿಸಿರುವ ದಾಖಲೆಗಳಿವೆ, ೨೦೦೮ ರಲ್ಲಿ ಈ ವ್ಯವಹಾರವು ೧೦.೯ ಬಿ. ಡಾಲರ್ ಗಳ ಆದಾಯ ಕಂಡಿತ್ತು.

    ಈ ವ್ಯವಹಾರ ಪ್ರತಿಕೃತಿಯ ಸಫಲತೆಗೆ ಮುಖ್ಯ ಕಾರಣ ಇದರಲ್ಲಿರುವ ವೈಯಕ್ತಿಕ ಸಂಬಂಧಗಳ ಬುನಾದಿ. ನಾನು ಆಗುಂತಕನನ್ನು ನಂಬುವುದಕ್ಕಿಂತ ನನ್ನ ಸ್ನೇಹಿತನನ್ನು ನಂಬುವುದು ಖಚಿತ, ಇದನೇ ಆಧರವಾಗಿಟ್ಟುಕೊಂಡು ಈ ವ್ಯವಹಾರ ಪ್ರತಿಕೃತಿಯನ್ನು ರಚಿಸಲಾಗಿದೆ.

    ಈ ವ್ಯವಹಾರ ಪ್ರತಿಕೃತಿಯನ್ನು ಸ್ವಲ್ಪ ಪರಿವರ್ತಿಸಿ ನೆಟ್ವರ್ಕ್ ಮಾರ್ಕೆಟಿಂಗ್, ಮತ್ತು ಮಲ್ಟಿಲೆವೆಲ್ ಮಾರ್ಕೆಟಿಂಗ್ ಎನ್ನುವ ವಿಧಾನಗಳನ್ನು ಕಂಡು ಹಿಡಿದಿದ್ದಾರೆ. ಇವುಗಳ ಬಗ್ಗೆ ನಾವು ಇನ್ನೊಮ್ಮೆ ವಿಚಾರಿಸೋಣ.

  • ಬೇಡಿಕೆ ಮತ್ತು ಪೂರೈಕೆ ಚರ್ಚೆ – ೩

    ಬೇಡಿಕೆ ಮತ್ತು ಪೂರೈಕೆಯ ಈ ಮುಂಚಿನ ಅಂಕಣದಲ್ಲಿ ನಾವು ಸಮಾನಾಂತರ ಬೆಲೆಯು ಹೇಗೆ ನಿಶ್ಚಯವಾಗುವುದು ಎಂದು ತಿಳಿದುಕೊಂಡೆವು. ಈ ಸಮಾನಾಂತರ ಬೆಲೆಯು ಬೇಡಿಕೆಯ ವ್ಯತ್ಯಾಸ ಕಂಡಾಗ ಹೇಗೆ ವರ್ತಿಸುವುದೆಂದು ಅರ್ಥೈಸಿಕೊಳ್ಳುವುದು ಈ ಅಂಕಣದ ಗುರಿ. ಇದಕ್ಕಾಗಿ ಈ ಕೆಳಗಿನ ಉದಾಹರಣೆಯೊಂದಿಗೆ ಅರ್ಥೈಸಿಕೊಳ್ಳೋಣ

    ಕಳೆದಬಾರಿಯ ಉದಾಹರಣೆಯಂತೆಯೆ ಈ ಬಾರಿಯೂ ನಿಂಬೇಹಣ್ಣನ್ನು ಹುಡುಕುತ್ತಾ ಹೋದ ನನಗೆ, ಕೇವಲ ಓರ್ವ ನಿಂಬೆ ಮಾರುತ್ತಿರುವ ವರ್ತಕನು ಸಿಕ್ಕಿದನು. ಈ ಬಾರಿ ಒಂದು ನಿಂಬೆಗೆ ರೂ ೪ ಎಂದು ಹೆಳಿದಾಗ ಅದನ್ನು ಚರ್ಚಿಸುವ ಮುನ್ನ ಇನ್ನೋರ್ವ ಗಿರಾಕಿಯು ಆಗಮಿಸಿದನು. ಈ ಪರಿವರ್ತನೆಯನ್ನು ಕಂಡ ವರ್ತಕನು ರೂ ೪ ಅನ್ನು ಮೇಲೇರಿಸಿ ರೂ ೫ ಎಂದ. ಗಿರಕಿಯು ರೂ ೪.೫೦ ಕ್ಕೆ ಕೇಳಿ ಕೊಂಡುಕೊಂಡು ಹೊರಟೆಬಿಟ್ಟ. ನಾನು ಕಮ್ಮಿಗೆ ಪ್ರಯತ್ನಿಸುವುದರಲ್ಲಿ ನನಗೆ ನಿಂಬೇಹಣ್ಣು ಸಿಗದೇಹೋಯಿತು. ಇದು ನನ್ನ ದಡ್ಡತನವಲ್ಲ ಕೇವಲ ವರ್ತಕನ ಜಾಣ್ಮೆ ಮತ್ತು ಪೈಪೋಟಿಯು ಕಾರಣವಾಗಿದೆ.

    ಇದರ, ಅಡಿಯಲ್ಲಿಯೆ ಬೇಡಿಕೆಯ ಇನ್ನೊಂದು ನಿಯಮವನ್ನು ತಿಳಿಯಬಹುದು – ಬೇಡಿಕೆ ಹೆಚ್ಚಾಗಿ ಪೂರೈಕೆಯು ಸ್ತಿರವಾಗಿದ್ದಲ್ಲಿ, ಸಮಾನಾಂತರ ಬೆಲೆಯು ಹೆಚ್ಚುತ್ತದೆ, ಅಂತೆಯೇ, ಆ ಬೆಲೆಗೆ ಮಾರುವ ಸಾಮಗ್ರಿಯೂ ಎರುವುವು (ಹೆಚ್ಚು ಲಾಭ ಸಿಗುವಾಗ ಏಕೆ ಬಿಡಬೇಕು?).

  • ಪರಿವರ್ತನೆ ಮತ್ತು ನಾವೀನ್ಯ

    ವ್ಯವಹಾರಗಳು ದಿನಂಪ್ರತಿ ಪರಿವರ್ತನೆಯ ಸವಾಲನ್ನು ಎದಿರುಸುತ್ತಲೇ ಇರುತ್ತದೆ. ವ್ಯವಹಾರಗಳು ಪರಿವರ್ತನೆಯನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಲು ನೋಡಿದರೂ, ಸಾಕಷ್ಟು ಬಾರಿ ಪರಿವರ್ತನೆಯು ನಮ್ಮ ಕಲ್ಪನಾ ಶಕ್ತಿಗೂ ಮೀರುವುದು ಸಹಜ. ಈ ಪರಿವರ್ತನೆಯನ್ನು ನಿಭಾಯಿಸುವುದು ಇಂದಿನ ಮ್ಯಾನೇಜರ್ ಗಳ ಪ್ರಮುಖ ಕಾರ್ಯಗಳಲ್ಲಿ ಒಂದು.

    ಈ ಪರಿಯ ಪರಿವರ್ತನೆಯು ವ್ಯವಹಾರಗಳು ಸದಾ ನವಿನತೆಯನ್ನು ಸ್ವೀಕರಿಸಬೇಕಾಗುತ್ತದೆ. ಕಣ್ಣಿಗೆ ಕಾಣುವ ಪರಿವರ್ತನೆಯನ್ನು ಮೀರಿ, ಕಾಣದ ಮುಂಬರುವ ಪರಿವರ್ತನೆಗೆಗೂ ಸದಾಸಿದ್ಧರಾಗಿರಬೇಕು. ಯಾವ ವ್ಯವಹಾರವು ಹೊರಗಿಂದ ಪರಿವರ್ತನೆಗಾಗಿ ಕಾಯದೆ, ತಾವೇ ಮುಂದುವರೆದು ಪರಿವರ್ತನೆಯ ಮೂಲವಾದಲ್ಲಿ ಆ ವ್ಯವಹಾರವು ಖಚಿತವಾಗಿ ಸ್ಪರ್ಧಿಗಳಿಗಿಂತ ಮುಂದಾಗುವುದು. ಆದ್ದರಿಂದ ವ್ಯವಹಾರಗಳು ಸದಾ ಪರಿವರ್ತನೆಯನ್ನು ಗೆಲ್ಲಲು ಹೊಸತನ್ನು ತಮ್ಮದಾಗಿಸಿಕೊಳ್ಳಬೇಕು.

    ನಾವೀನ್ಯವನ್ನು ತನ್ನದಾಗಿಸಿಕೊಂಡ “ಡೆಲ್” ಕಂಪನಿಯು ವಿಶ್ವದಲ್ಲೆ ಅತ್ಯಂತ ವೇಗವಾಗಿ ಗಣಕಯಂತ್ರವನ್ನು ತನ್ನ ಗ್ರಾಹಕರಿಗೆ ತಲುಪಿಸ ಬಲ್ಲದು. ಅಂತೆಯೇ, ಪರಿವರ್ತನೆಯನ್ನು ಅತೀ ಶೀಘ್ರದಲ್ಲಿ ತಿಳಿದುಕೊಂಡು ಅದಕ್ಕೆ ತಕ್ಕ ನಾವೀನ್ಯವನ್ನು ತಿಳಿದ “ಆಪಲ್” ಇಂದು ಜಾಣತನದ-ಚಲನವಾಣಿಗಳ ಸ್ಪರ್ಧೆಯಲ್ಲಿ ಪ್ರಥಮವಾಗಿದೆ. ಇಂತಹ ಹಲವಾರು ಉದಾಹರಣೆಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಯಾವ ವ್ಯವಹಾರೊದ್ಯಮವು ನಾವೀನ್ಯ ಮತ್ತು ಪರಿವರ್ತನೆಯನ್ನು ತನ್ನದಾಗಿಸಿಕೊಳ್ಳದೆ ಇರುವುದೋ ಅವುಗಳು ಸಾಧಾರಣವಾಗಿ ಉಳಿದ ವ್ಯವಹಾರಗಳಿಗಿಂತ ಮುಂಚಿತವಾಗಿ ಬಿದ್ದುಹೋದದ್ದನ್ನು ಕಂಡಿದ್ದೇವೆ.

    ಪರಿವರ್ತನೆಯ ಈ ವ್ಯವಹಾರದ ನವಯುಗದಲ್ಲಿ ಅತ್ಯಂತ ನಾವೀನ್ಯವನ್ನುಳ್ಳ ವ್ಯವಹಾರವೋಂದೇ ಬೆಳೆಯಬಲ್ಲದು – ಇಂತಹ ಪರಿಸರದಲ್ಲಿ ಸೂಕ್ತ ನಿರ್ಧಾರತೆಗೆದುಕೊಳ್ಳುವ ಮ್ಯಾನೇಜರ್ ಗಳ ಜವಾಬ್ದಾರಿ ಇನ್ನೂ ಎರುವುವು.

    ಆಂಗ್ಲ ಅಂಕಣ:

  • ಬಂಡವಾಳದ ಪ್ರಮುಖ ನಂಟು

    ಉತ್ಪನ್ನಾಂಶ ಮೇಲಿನ ಅಂಕಣದಲ್ಲಿ ನಾವು ಬಂಡವಾಳದ ಪ್ರಾಮುಖ್ಯತೆಯನ್ನು ತಿಳಿದುಕೊಂಡೆವು. ಇದರಂತೆ ಪ್ರತಿಯೊಂದು ಉತ್ಪನ್ನಾಂಶಕ್ಕೂ ಹಣಕಾಸಿನ ವ್ಯವಸ್ಥೆ ಮಾಡುವುದು ಬಹು ಮುಖ್ಯ. ಇಂತಹ ಬಂಡವಾಳವನ್ನು ನಾವು ಕೆಳಕಂಡ ರೀತಿಯಲ್ಲಿ ಒಟ್ಟುಗೂಡಿಸಬಹುದು.

    * ನನ್ನಲ್ಲಿರುವ ಹಣವನ್ನು ವ್ಯವಹಾರದಲ್ಲಿ ಬಂಡವಾಳವನ್ನಾಗಿ ಹಾಕಿ, ವ್ಯವಹಾರದಿಂದ ಬರುವ ಲಾಭವನ್ನು ನನ್ನದಾಗಿಸಿಕೊಳ್ಳಬಹುದು.
    * ನನ್ನಲ್ಲಿರುವ ಹಣ ಸಾಕಾಗದಿದ್ದಲ್ಲಿ, ನನ್ನ ಮಿತ್ರರು ಮತ್ತು ಸಂಬಂಧಿಗಳಲ್ಲಿ ಕೇಳಿ ಪಡೆದು ನಂತರ ವ್ಯವಹಾರದ ಆದಾಯದಿಂದ ಲಾಭ ಪಡೆದು ಅದನ್ನು ಇವರಲ್ಲಿ ಹಂಚಬಹುದು.
    * ಬ್ಯಾಂಕಿನಿಂದ ಸಾಲಪಡೆದು, ಅದನ್ನು ಬಂಡವಾಳವಾಗಿ ವ್ಯವಹಾರದಲ್ಲಿ ಹಾಕಿ, ಬ್ಯಾಂಕಿಗೆ ಬಡ್ದಿಯನ್ನು ನೀಡಿ ಉಳಿದ ಲಾಭವನ್ನು ನನ್ನದಾಗಿದಿರಿಸಬಹುದು.
    * ಜನಸಾಮಾನ್ಯರಿಂದ ಹಣಪಡೆದು ಅವರಿಗೆ ಪತ್ರವನ್ನು ಭರವಸೆಗೆ ನೀಡಿ,(ಶೇರ್) ಆದಾಯದಿಂದ ಬರುವ ಲಾಭವನ್ನು ಇವರೆಲ್ಲರೊಂದಿಗೆ ಹಂಚಬಹುದು.

    ಈ ಹಿನ್ನಲೆಯಲ್ಲಿ ನಾವು ತಿಳಿಯುವುದೆನೆಂದರೆ, ಯಾವುದೆ ವ್ಯವಹಾರವು ಅದರಲ್ಲಿಟ್ಟ ಬಂಡವಾಳವು ಭೂತಗನ್ನಡಿಯಲ್ಲಿ ಕಾಣುವಂತೆ ಹಿಗ್ಗಿಸಿ ಹಿಂತಿರುವಿಸುವುವು ಬಹುಮುಖ್ಯ. ಈ ಬಂಡವಾಳ ಯಾವುದೇ ವ್ಯವಹಾರಕ್ಕಾಗಿರಬಹುದು ಅಥವಾ ವ್ಯವಹಾರದಲ್ಲಿಯ ಹೊಸ ಉತ್ಪನ್ನವಾಗಿರಬಹುದು.

    ಬಂಡವಾಳವನ್ನು ಯಾವುದರಲ್ಲಿ ಹಾಕುವುದು ಎಂದು ನಿರ್ಧರಿಸುವುದು ಬಹು ಕಠಿಣವಾದುದು. ಎಲ್ಲಾ ಬಂಡವಾಳ ಹೂಡುವ ಅವಕಾಶಗಳನ್ನು ಪೂರ್ತಿಯಾಗಿ ನೋಡಿ ನಂತರ ನಿರ್ಧರಿಸಲು, ಒಂದು ಸಮಾನಂತರವಾದ ಪ್ರಮಾಣವನ್ನು ಕಂಡುಕೊಳುವುದು ಮುಖ್ಯ. ಇವೆಲ್ಲಾ ಅವಕಾಶಗಳಿಂದ ಬರುವ ಬಂಡವಾಳದ ವೃಧ್ಧಿಯನ್ನು ಗಮನಿಸಿ ನಂತರ ನಿರ್ಧಾರ ಮಾಡಬೇಕು.

    ಬಂಡವಾಳದ ವೃಧ್ಧಿಯನ್ನು ಹೇಗೆ ಕಂಡುಹಿಡಿಯುವುದು ಎಂದು ಮುಂದಿನ ಅಂಕಣದಲ್ಲಿ ನೊಡೋಣ.

  • ವ್ಯವಹಾರ ಪ್ರತಿಕೃತಿ – ಚರ್ಚೆ ಭಾಗ ೨

    ವ್ಯವಹಾರ ಪ್ರತಿಕೃತಿಯ ಮುಂಚಿನ ಅಂಕಣದಲ್ಲಿ, ನಾವು ಉದಾಹರಣೆಗಳನ್ನು ನಿಡುವುದಾಗಿ ಹೇಳಿದ್ದೆವು. ಈ ಶ್ರೇಣಿಯಲ್ಲಿ ಇದು ಮೊದಲನೆಯದು.

    ಸರ್ವೇ ಸಾಮನ್ಯವಾಗಿ ನಾವು ಗಡ್ಡವನ್ನು ತೆಗೆಯಲು ಉಪಯೊಗಿಸುವ “ರೇಜ಼ರ್ ಮತ್ತು ಬ್ಲೇಡನ್ನು” ಕೂಲಂಕುಷವಾಗಿ ನೊಡಿದಾಗ, ಅದರ ಹಿಂದಿನ ಆಲೋಚನೆಯನ್ನು ಅರ್ಥೈಸಿಕೊಳ್ಳುವುದು ಸುಲಭವಾಗುತ್ತದೆ.

    ಒಂದುಬಾರಿ ರೇಜ಼ರನ್ನು ಕೊಂಡುಕೊಂಡರೆ ಮತ್ತೆ ನಾವು ಅದೇ ರೇಜ಼ರ್ ಗೆ ಬ್ಲೇಡ್ ಮಾತ್ರ ಕೊಳ್ಳುವುದು ಸಾಕಾಗುತ್ತದೆ. ಇದರ ಹಿಂದೆ ಯೋಚನೆಯನ್ನು ತಿಳಿದುಕೊಳ್ಳುವುದು ಮುಖ್ಯ. ನಾವು ಕೇವಲ ಒಂದೇ ಬಾರಿ “ಯುಸ್ ಅಂಡ್ ಥ್ರೊ” ರೇಜ಼ರ್ ಉಪಯೋಗಿಸಿದರೆ ಒಂದೇ ಬಾರಿಗೆ ಹಣ ಒಟ್ಟು ಮಾಡಬಹುದು, ಅದೇ ರೇಜ಼ರಿಗೆ ಬ್ಲೇಡ್ ಕೊಂಡುಕೊಂಡು ಬದಲಿಸುವ ಅವಕಾಶ ನೀಡಿದರೆ, ಕೇವಲ ಮೊದಲ ಬಾರಿ ಮಾತ್ರವಲ್ಲ ಅದು ಮೊಂಡಾಗಿ ಬ್ಲೇಡ್ ಬದಲಾಯಿಸುವ ಪ್ರತೀ ಬಾರಿಯು ಕಂಪನಿಗೆ ಆದಾಯವಾಗುತ್ತಲೇ ಇರುತ್ತದೆ.

    ಇದೇ ಇಂತಹ ವ್ಯವಹಾರಗಳ ಪ್ರತಿಕೃತಿ ಯಾಗಿರುತ್ತದೆ. ಈ ಪ್ರತಿಕೃತಿಗೆ ಗಾಳಕ್ಕೆ ಹೊಲಿಸಬಹುದು ಆದ್ದರಿಂದ ಇದಕ್ಕೆ “ಬೈಟ್ ಅಂಡ್ ಹುಕ್” ಬಿಸಿನೆಸ್ ಮೊಡೆಲ್ ಎಂದು ಕರೆಯುತ್ತಾರೆ.

  • ಬೇಡಿಕೆ ಮತ್ತು ಪೂರೈಕೆ ಚರ್ಚೆ- ೨

    ಈ ಮುಂಚಿನ ಬೇಡಿಕೆ ಮತ್ತು ಪೂರೈಕೆ ಕುರಿತ ಅಂಕಣದಲ್ಲಿ ಗ್ರಾಹಕ ಮತ್ತು ವರ್ತಕರು, ಬೆಲೆ ಮತ್ತು ಅದರಿಂದ ಕೊಂಡುಕೊಳ್ಳುವ ವಸ್ತುಗಳ ಸಂಬಂಧದಲ್ಲಿ ಅವರ ವರ್ತನೆಯನ್ನು ಗಮನಿಸಿದೆವು. ಇಂದಿನ ಅಂಕಣದಲ್ಲಿ ಇವರಿಬ್ಬರು ಕೂಡಿದಾಗ ಆ ವಸ್ತುವಿನ ದರ ಹೇಗೆ ನಿರ್ಧಾರವಾಗುವುದು ಎಂದು ತಿಳಿದುಕೊಳ್ಳೋಣ. ಇದಕ್ಕಾಗಿ ಈ ಕೆಳಗಿನ ಸನ್ನಿವೇಶವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ.

    ನಿಂಬೆಹಣ್ಣನ್ನು ಕೊಂಡುಕೊಳ್ಳಲೆಂದು ನಾನು ರೂ. ೧೦ನ್ನು ತೆಗೆದುಕೊಂಡು ನಡೆದೆ. ಕಳೆದಬಾರಿ ನಾನು ಮಾರುಕಟ್ಟೆಗೆ ಹೋದಾಗ, ಒಂದು ನಿಂಬೆಹಣ್ಣಿಗೆ ರೂ. ೨ ಇದ್ದಿತು. ಆ ಲೆಕ್ಕದಲ್ಲಿ ನನಗೆ ೫ ನಿಂಬೆಹಣ್ಣು ಸಿಗಬಹುದೆಂದುಕೊಂಡು ನಡೆದೆ. ಮಾರುಕಟ್ಟೆಯೆಲ್ಲಾ ಅಲೆದರೂ ನಮಗೆ ಸಿಕ್ಕಿದ್ದು ಬರೀ ಒಬ್ಬನೆ ವರ್ತಕ. ಆವನು, ಒಂದು ಹಣ್ಣಿಗೆ ರೂ ೪ ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಸ್ವಲ್ಪ ಚರ್ಚೆ ನಡೆದಮೆಲೆ ನನಗೆ ರೂ. ೩ ರಕ್ಕೆ ಒಂದು ಹಣ್ಣಿನಂತೆ ನೀಡಲು ಒಪ್ಪಿಕೊಂಡ. ರು ೧೦ಕ್ಕೆ, ೫ ಹಣ್ಣು ಸಿಗಬಹುದೆಂದುಕೊಂಡ ನನಗೆ ೩ ಹಣ್ಣು ಸಿಕ್ಕವು; ೨ ಹಣ್ಣು ಮಾರಬಹುದೆಂದು ಕೊಂಡ ವರ್ತಕನು ೩ ಹಣ್ಣಿಗೆ ಒಪ್ಪಿಕೊಂಡನು.

    ನಾವಿಬ್ಬರೂ ಒಪ್ಪಿಕೊಂಡ ಈ ಬೆಲೆಗೆ “ಸಮಾನಾಂತರ ಬೆಲೆ” ಎಂದು ಕರೆಯುತ್ತೆವೆ. ಈ ಬೆಲೆಗೆ ವರ್ತಕ ಮತ್ತು ಗ್ರಾಹಕ ಇಬ್ಬರು ಒಪ್ಪಿಕೊಂಡು ವ್ಯವಹಾರ ನಡೆಸಲು ನಿಶ್ಚಯಿಸಿರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ನಾನು ರೂ. ೨ ರಿಂದ ಬೆಲೆ ಹೆಚ್ಚದಂತೆ ಬರಿ ೩ ನಿಂಬೆಹಣ್ಣು ಕೊಳ್ಳಲು ಸಮರ್ಥನಾದೆ, ಇದಕ್ಕಿಂತ ಜಾಸ್ತಿ ವ್ಯಯಮಾಡಲು ನಾನು ತಯಾರಿರಲಿಲ್ಲ; ಅಂತೆಯೆ, ವರ್ತಕನು ರೂ. ೪ರಿಂದ ಕೆಳಕ್ಕೆ ರೂ. ೩ರ ವರೆಗೆ ಬಂದನು, ಇದಕ್ಕಿಂತ ಕೆಳಗಿಳಿಯಲು ಅವನು ತಯಾರಿರಲಿಲ್ಲ. ಹಾಗಾಗಿ, ರೂ.೩ರಿಗೆ ಇಬ್ಬರೂ ಒಪ್ಪಿಕೊಂಡು ವ್ಯವಹಾರ ನಡೆಸಿದೆವು. ನಾವಿಬ್ಬರೂ ನಮ್ಮ ನಮ್ಮ ಬೆಲೆಯ ಮೊತ್ತದಿಂದ ಅಲುಗಾಡಲು ತಯಾರಿರಲಿಲ್ಲದಿದ್ದರೆ, ಈ ವ್ಯವಹಾರ ಕುದುರುತ್ತಲೇ ಇರಲಿಲ್ಲ. ವ್ಯವಹಾರ ಕುದುರ ಬೇಕಾದಲ್ಲಿ ಸರಿಯಾದ ಸಮಾನಾಂತರ ಬೆಲೆಯನ್ನು ಕಂಡುಕೊಳ್ಳುವುದು ಬಹುಮುಖ್ಯ.

    ಮುಂದಿನ ಈ ಶ್ರೇಣಿಯ ಅಂಕಣದಲ್ಲಿ, ನಿರ್ಧಾರ ತೆಗೆದುಕೊಂಡ ಬಗೆಯನ್ನು ಕೂಲಂಕುಷವಾಗಿ ಗಮನಿಸೋಣ.

    ಇದರ ಆಂಗ್ಲ ಅಂಕಣ ಓದಿ:http://somanagement.blogspot.com/2011/02/demand-and-supply-discussion-2.html
  • ಮಾಹಿತಿ ವೈದೃಶ್ಯ

    ಇತ್ತೀಚಿಗೆ, ನನ್ನ ಸ್ನೇಹಿತನೊಂದಿಗೆ ಒಂದು “ಸೆಕೆಂಡ್ ಹ್ಯಾಂಡ್ ಕಾರ್” ವಿಚಾರಿಸಲು ಹೊರಡುವ ಮುನ್ನ ಒಬ್ಬರನ್ನು ವಿಚಾರಿಸಿದಾಗ ಅವರು, “ಮಾರುತಿ ಟ್ರು ವ್ಯಾಲ್ಯು” ಗೆ ಹೋಗಿ ಅಂತ ಸಲಹೆ ನೀಡಿದರು. ಯಾಕಿರಬಹುದೆಂದು ಯೋಚನೆ ಮಾಡಿದಾಗ ಈ ಕೆಳಗಿನ ತಿಳುವಳಿಕೆ ಮೂಡಿದ್ದು.

    ೧೯೭೦ ಯಲ್ಲಿ ಜೋರ್ಜ್ ಅಕ್ರೆಲೋಫ್ ಎನ್ನುವ ಅರ್ಥಶಾಸ್ತ್ರಜ್ಞ, ಒಂದು ಸಿದ್ಧಾಂತವನ್ನು ನಮ್ಮ ಮುಂದಿರಿಸಿದ, ಈ ಸಿದ್ಧಾಂತವು ಅವನಿಗೆ ಪ್ರಖ್ಯಾತ ನೊಬೆಲ್ ಪ್ರಶಸ್ತಿ ೨೦೦೧ ರಲ್ಲಿ ದೊರಕಿಸಿತು.ಈ ಸಿದ್ಧಾಂತವನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ, ಮತ್ತು ವ್ಯವಹಾರದಲ್ಲಿ ಕಾಣಬಹುದು.

    ಈ ಮೇಲ್ಕಂಡ ಸನ್ನಿವೇಶವನ್ನು ಮೆಲುಕು ಹಾಕುತ್ತಿದ್ದ ನನಗೆ ಅರ್ಥವಾದದ್ದು ಹೀಗೆ – ಸೆಕೆಂಡ್ ಹ್ಯಾಂಡ್ ಕಾರ್ ಮಾರಲು ಇಚ್ಛಿಸುವ ಜನರು ಹಲವಾರು ಇರುತ್ತಾರೆ, ವ್ಯವಹಾರಕ್ಕೆಂದು ಬರುವ ಕಾರುಗಳೆಲ್ಲವು ಚೆನ್ನಾಗಿರುತ್ತವೆ ಅಂತೇನಿಲ್ಲ, ಕೆಲವು ಉತ್ತಮವಾಗಿದ್ದರೆ ಇನ್ನು ಕೆಲವು ಕಳಪೆ ಮಟ್ಟದಾಗಿರುತ್ತವೆ. ಒಟ್ಟಿಗೆ ಸಾವಿರಾರು ಕಾರುಗಳಿದ್ದಲ್ಲಿ ಇವೆರಡನ್ನೂ ಹೇಗೆ ವಿಂಗಡಿಸಬಹುದು? ಕಾರುಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿದ್ದಲ್ಲಿ, ಕಳಪೆ ಕಾರುಗಳಿರಬಹುದೆಂದು ನಾವು ಹೆಚ್ಚು ಬೆಲೆ ನೀಡಲು ತಯಾರಿರುವುದಿಲ್ಲ, ಹಾಗಾಗಿ ಒಳ್ಳೆಯ ಕಾರುಗಳು ಮಾರುಕಟ್ಟೆಗೆ ಬರುವುದಿಲ್ಲ. ಇದರಿಂದ ನಮ್ಮ ಭರವಸೆ ಕುಗ್ಗುತ್ತಲೇ ಇರುತ್ತದೆ.

    ಇಂತಹ ಸಂದರ್ಭದಲ್ಲಿ ಒಳ್ಳೆಯ ಕಾರುಗಳನ್ನು ಗುರುತಿಸಲು ಹೆಚ್ಚು ಮಾಹಿತಿ ನೀಡ ಬೇಕಾಗುತ್ತದೆ. ಈ ಮಾಹಿತಿಯನ್ನು “ಮಾರುತಿ ಟ್ರು ವ್ಯಾಲ್ಯು” ಎನ್ನುವ ನಾಮ ಪತಾಕೆಯಿಂದ ತಿಳಿಯಬಹುದು.ಇದನ್ನು “ಸಿಗ್ನಲ್” ಎಂದು ತಿಳಿಯಬಹುದು. ಇದು, ಈ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಬಹುದು.

    ಮಾಹಿತಿ ವೈದೃಶ್ಯದ ಅತ್ಯಂತ ಹೆಚ್ಚಿನ ಪರಿಣಾಮವನ್ನು ವಿಮೆಯ ಕ್ಷೇತ್ರದಲ್ಲಿ ಕಾಣಬಹುದು, ಆದರೆ ಈ ಸಮಸ್ಯೆ ಎಲ್ಲ ವ್ಯವಹಾರಗಳಲ್ಲೂ ನೋಡಬಹುದು – ತಂಪು ಪಾನೀಯದಿಂದ ಹಿಡಿದು ಕೆಲಸಕ್ಕೆ ನಡೆಯುವ ಸಂದರ್ಶನದಲ್ಲೂ ನೋಡಬಹುದು. ನಿರ್ಧರ ತೆಗೆದುಕೊಳ್ಳುವಲ್ಲಿ ಪ್ರಬಂಧಕರು ಖಡ್ಡಾಯವಾಗಿ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.